ಬಿಜೆಪಿಯ ಅಭ್ಯರ್ಥಿ ಅಲ್ಲ ಬಿಜೆಪಿ ವಿರುದ್ಧ ನಮ್ಮ ಪ್ರಚಾರ

ಬಿಜೆಪಿಯ ಅಭ್ಯರ್ಥಿ ಅಲ್ಲ ಬಿಜೆಪಿ ವಿರುದ್ಧ ನಮ್ಮ ಪ್ರಚಾರ

ಆನೇಕಲ್, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿಯ ಅಭ್ಯರ್ಥಿಯ ವಿರುದ್ಧ ಅಲ್ಲ ಬೆಜೆಪಿ ವಿರುದ್ಧ ನಮ್ಮ ಪ್ರಚಾರ. ಬಿಜೆಪಿಯ ಹಲವು ಸದಸ್ಯರು ಸಂವಿಧಾನ ವನ್ನು  ಬದಲಾವಣೆ ಮಾಡಲು ಹೊರಟಿದ್ದಾರೆ. ಈ ಚುನಾವಣೆಯನ್ನು ಕಟ್ಟಕಡೆಯ ಚುನಾವಣೆ ಮಾಡಿ ಸಂವಿಧಾನ ಬದಲಾವಣೆ ಮಾಡಲು ಹೊರಟಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆಚ್ ಎಸ್ ಆರ್ ಲೇಔಟ್ ನ ಪ್ರಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರಿ ಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ.

ಸಂವಿಧಾನವನ್ನು ರಕ್ಷಣೆ ಮಾಡಿ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಮತ ಕೇಳುತ್ತಿದ್ದೇವೆ. ಬೆಂಗಳೂರು ದಕ್ಷಿಣದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಜನಸಾಮಾನ್ಯರು ಮತ ಹಾಕುತ್ತಾರೆ ಅನ್ನುವಂತಹ ನಂಬಿಕೆ ಇದೆ. ರಾಮ ಮಂದಿರ ವಿಷಯವಾಗಿ ಹಳೆಯ ಪುರಾಣ ಶುರು ಮಾಡಿದ್ದಾರೆ. ರಾಮಮಂದಿರ ಒಂದನ್ನೇ ಚುನಾವಣೆಯ ಅಸ್ತ್ರ  ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ರೈತರ ,ಕಾರ್ಮಿಕರ ,ದುರ್ಬಲರ ಹಾಗು ಮಹಿಳೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಇರುವ ಪಕ್ಷ ಬಿಜೆಪಿ ಪಕ್ಷ. ಭಾರತೀಯ ಜನತಾ ಪಾರ್ಟಿಯ ಮಾನಸಿಕತೆ ಇರುವಂತಹ ವ್ಯಕ್ತಿಗಳು ಕ್ಷೇತ್ರದಲ್ಲಿ ಪ್ರತಿನಿಧಿಸುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos