‘ಯುವಕರು ಭವಿಷ್ಯ ನಿರ್ಮಾಣದ ರೂವಾರಿಗಳು’

‘ಯುವಕರು ಭವಿಷ್ಯ ನಿರ್ಮಾಣದ ರೂವಾರಿಗಳು’

ಶಹಾಪುರ: ಯುವಕರು ಈ ದೇಶದ ಭವಿಷ್ಯ ನಿರ್ಮಾಣದ ರೂವಾರಿಗಳು ಆಗಿದ್ದು, ಪ್ರತಿಯೊಬ್ಬರು ಸದೃಢ ಆರೋಗ್ಯ ಕಾಯ್ದುಕೊಳ್ಳಲು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹಿರಿಯ ಮುಖಂಡ ಮಲ್ಲಣ್ಣ ಮಡ್ಡಿ ತಿಳಿಸಿದರು.

ನಗರದ ಬಾಲಕರ ಪ್ರೌಢಶಾಲೆ ಆವರಣದಲ್ಲಿ ಭಾರತ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಹೊನಲುಬೆಳಕಿನ ವಾಲಿಬಾಲ್ ಪಂದ್ಯದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿ ಕ್ರೀಡಾಪಟುಗಳ ದೊಡ್ಡ ತಂಡವೇ ಇದೆ, ಹಿರಿಯ ಕ್ರೀಡಾಪಟುಗಳು ಯುವಕರಿಗೆ ಪ್ರೇರಣೆ ನೀಡಿ,  ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಬೇಕು, ಹೆಚ್ಚಿನ ಪ್ರಯತ್ನ ಸಾಗಲಿ ಎಂದರು.

ಈ ವೇಳೆ ಹಿರಿಯ ನಿವೃತ್ತ ದೈಹಿಕ ಶಿಕ್ಷಕ ಸೋಮಶೇಖರಯ್ಯ ಹಿರೇಮಠ, ದೈ.ಶಿ ಸುಧಾಕರ ಗುಡಿ  ಅವರಿಗೆ ಸನ್ಮಾನಿಸಲಾಯಿತು. ಪ್ರಮುಖರಾದ  ಲಾತೂರು, ಸುಗೂರೇಶ ಗುಳಗಿ, ಶಿವಕುಮಾರ ಆದೋನಿ, ಉಮೇಶ ಗುತ್ತೇದಾರ, ಬಹುಮಾನ ನೀಡಿದರು,  ಹಿರಿಯರಾದ ದೇಸಾಯಪ್ಪ ದೇಸಾಯಿ, ಮಾಜಿ ಸೈನಿಕ ಮರೆಪ್ಪ ಮಿಲ್ಟ್ರಿ, ಶಿವರಾಜ ದೋರನಹಳ್ಳಿ, ಬಸವರಾಜ ಕಡಗಂಚಿ, ಸುನೀಲ ಗಣಾಚಾರಿ ಸೇರಿದಂತೆ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ೧೦ ತಂಡಗಳು ಪಾಲ್ಗೊಂಡಿದ್ದವು.

ಈ ಸಂದರ್ಭದಲ್ಲಿ ಡಾ.ರಾಧಾಕೃಷ್ಣನ, ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos