ಗುಬ್ಬಿ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಗೇಟ್ ಸಮೀಪದಲ್ಲಿದ್ದ ಬೃಹತ್ ಆಲದಮರ ಹಾಗೂ ಹಿಪ್ಪೆಮರದಲ್ಲಿ ಸಾವಿರಾರು ಬಾವಲಿಗಳು ವಾಸವಿದ್ದವು.
ಹೆದ್ದಾರಿ ವಿಸ್ತರಣೆಯ ಸರ್ವೇ ವೇಳೆ ಮರಗಳನ್ನು ಉಳಿಸುವಂತೆ ಸ್ಥಳೀಯರು ಮನವಿ ಮಾಡಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಗೂ ತಿಳಿಸಲಾಗಿತ್ತು. ಅಂದು ಮರಗಳನ್ನು ಉಳಿಸುವ ಮಾತು ನೀಡಿದ್ದ ಗುತ್ತಿಗೆದಾರರು ಇಂದು ಆಲದಮರದ ಎರಡು ದೊಡ್ಡಕೊಂಬೆ ಧರೆಗುರುಳಿಸಿಛ್ಛ, ವಾಸಸ್ಥಾನ ಇಲ್ಲದೆ ಬಾವಲಿಗಳು ಪರದಾಡುತ್ತಿವೆ.