ಚಿತ್ರದುರ್ಗ, ಜ. 6 : ಮದುವೆಯಾಗಿ ಎರಡೇ ವರ್ಷಕ್ಕೆ ಮಹಿಳೆಯೊಬ್ಬಳು ಅನುಮಾನಸ್ಪ ರೀತಿಯಲ್ಲಿ ಸಾವನ್ನಪ್ಪಿದ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲಂಬಾಣಿಹಟ್ಟಿ ಘಟನೆ ನಡೆದಿದೆ.
ಲಂಬಾಣಿಹಟ್ಟಿಯ ನಸ್ರೀನ್ ತಾಜ್ ಮೃತ ಮಹಿಳೆ. ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಎರಡು ವರ್ಷದ ಹಿಂದೆ ಮೆಕಾನಿಕ್ ಕೆಲಸ ಮಾಡುತ್ತಿದ್ದ ಯಾಸೀನ್ ಜೊತೆ ನಸ್ರೀನ್ ವಿವಾಹವಾಗಿತ್ತು. ಮೊದಲು ದಂಪತಿ ಪ್ರೀತಿಯಿಂದಲೇ ಇದ್ದರು. ಎರಡು ಕುಟುಂಬಸ್ಥರು ಸಂತಸವಾಗಿದ್ದರು. ದಂಪತಿಗೆ ಮುದ್ದಾದ ಮಗು ಸಹ ಇತ್ತು. ಆದರೆ ಇತ್ತೀಚಿಗೆ ಹಲವು ದುಶ್ಚಟಗಳಿಗೆ ಬಿದ್ದಿದ್ದ ಯಾಸೀನ್, ಹಣದ ವ್ಯಾಮೋಹದಿಂದಾಗಿ ಪತ್ನಿ ನಸ್ರೀನ್ಗೆ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದ ಎಂದು ಯಾಶೀನ್ ಸಂಬಂಧಿಕರು ಆರೋಪಿಸಿದ್ದಾರೆ.ಯಾಸೀನ್ ಸಣ್ಣಪುಟ್ಟ ವಿಚಾರಕ್ಕೆ ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದ. ಈ ವೇಳೆ ಪತ್ನಿಗೆ ಹೊಡೆಯುತ್ತಿದ್ದ ಹಾಗೂ ಕಿರುಕುಳ ನೀಡಿ ಹಣ ತರುವಂತೆ ಹಿಂಸಿಸುತ್ತಿದ್ದ ಎಂದು ನಸ್ರೀನ್ ಕುಟುಂಬಸ್ಥರು ದೂರಿದ್ದಾರೆ.