ಮಂಗಳೂರು, ಡಿ. 2 : ವಿಷಯುಕ್ತ ಬಾವಿ ನೀರು ಸೇವಿಸಿ 8 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಸ್ವಸ್ಥಕ್ಕೊಳಗಾದವರು ರಾಜೇಶ್ (12), ಮೋನಿಸ್(12), ಶ್ರವಣ್(12), ಸುದೀಪ್(12),ಚೇತನ್ ಕುಮಾರ್(13), ರಾಧಾಕೃಷ್ಣ(14), ಸುದೀಶ್(14), ಯೋಗೀಶ್(14) ಮೃತರು ಎಂದು ತಿಳಿದು ಬಂದಿದೆ.