ರಾಯಚೂರು,ನ. 25 : ಬಿಜೆಪಿ ನಾಯಕರಿಗೆ ಬಸವರಾಜ ತುರ್ವಿಹಾಳ ಶಾಕ್ ನೀಡಿದ್ದಾರೆ.
ತುಂಗಭದ್ರಾ ಮೇಲ್ದಂಡೆ ಯೋಜನೆಯ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಸ್ಕಿಯ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಯಿಂದ ಸ್ಪರ್ಧಿಸಲು ಯಾವುದೇ ತಡೆ ಇರಬಾರದೆಂಬ ಉದ್ದೇಶದಿಂದ ಬಸನಗೌಡ ತುರ್ವಿಹಾಳಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲಾಗಿತ್ತು. ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸನಗೌಡ, ಕೇಸ್ ವಾಪಸ್ ಪಡೆಯುವ ಸಂಬಂಧ ಯಾವುದೇ ಸಂಧಾನಕ್ಕೆ ಮಣಿಯದೆ ಕಾಡಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.