ಇಂದು ನಿಖಿಲ್ ಕುಮಾರಸ್ವಾ ಅದ್ಧೂರಿ ನಿಶ್ಚಿತಾರ್ಥ

ಇಂದು ನಿಖಿಲ್ ಕುಮಾರಸ್ವಾ ಅದ್ಧೂರಿ ನಿಶ್ಚಿತಾರ್ಥ

ಬೆಂಗಳೂರು, ಫೆ. 10: ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಭಿನ್ನ ರೀತಿಯ ಪಾತ್ರದಲ್ಲಿ ಅಭಿಮಾನಿಗಳ ಮನ ಗೆದ್ದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಗೆ ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ರಂಗದವರು ಹಾಗೂ ರಾಜಕೀಯ ರಂಗದವರು, ಬಂಧು ಮಿತ್ರರು ಬಂದು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿಗೆ ಆಶೀರ್ವದಿಸಿದ್ದಾರೆ.

ನಿಶ್ಚಿತಾರ್ಥ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ತಾಜ್ ವೆಸ್ಟೆಂಡ್ ನ ಪೂರ್ವ ದಿಕ್ಕಿಗೆ ಇರುವ ವೆಸ್ಟೆಂಡ್ ಕೋರ್ಟ್ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ.

ಇದೇ ಹೋಟೆಲ್ ನಲ್ಲಿರುವ ಮರಗಿಡಗಳ ನಡುವೆ ನಿಶ್ಚಿತಾರ್ಥ ನಡೆಯಬೇಕು ಎಂಬುದು ನಿಖಿಲ್ ಕುಮಾರ್ ಆಸೆಯಾಗಿತ್ತಂತೆ. ಹೀಗಾಗಿ ನಿಶ್ಚಿತಾರ್ಥದ ವೇದಿಕೆ ಸಂಪೂರ್ಣ ವೈಟ್ ಥೀಮ್ನಲ್ಲಿ ಸಿದ್ಧವಾಗಿದ್ದು, ಕಾರ್ಪೆಟ್ನಿಂದ ಹಿಡಿದು ಹುಡುಗ-ಹುಡುಗಿ ಉಂಗುರ ಬದಲಾಯಿಸುವ ಮಂಟಪ ಕೂಡ ಶ್ವೇತ ವರ್ಣದಿಂದ ಕಂಗೊಳಿಸುತ್ತಿದೆ.

ನಿಶ್ಚಿತಾರ್ಥದ ಮಂಟಪ ಮತ್ತು ಕಾರ್ಯಕ್ರಮ ನಡೆಯುವ ಜಾಗವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿ ಬಣ್ಣದ ಹೂ ತರಿಸಲಾಗಿದೆ. ದೆಹಲಿಯಿಂದ ಕ್ರಿಸ್ಟಲ್ಸ್ಗಳನ್ನು ತರಿಸಿ ಅಲಂಕಾರಕ್ಕೆ ಬಳಸಿಕೊಳ್ಳಲಾಗಿದ್ದು, ಗಣಪತಿ ಪೂಜೆ ಸಹ ಇರಲಿದೆ. ಜೊತೆಗೆ ಕುಂಕುಮ ಶಾಸ್ತ್ರವೂ ಈ ಶ್ವೇತ ವರ್ಣದ ಮಂಟಪದಲ್ಲಿ ಜರುಗಲಿದ್ದು, 35 ಬಗೆಯ ಕರ್ನಾಟಕ ಶೈಲಿಯ ಖಾದ್ಯಗಳು ಇರಲಿವೆ.

ಫ್ರೆಶ್ ನ್ಯೂಸ್

Latest Posts

Featured Videos