ಇಂದು ಚೆನ್ನೈಯಲ್ಲಿ ಮೊದಲ ಪಂದ್ಯ

ಇಂದು ಚೆನ್ನೈಯಲ್ಲಿ ಮೊದಲ ಪಂದ್ಯ

ಚೆನ್ನೈ , ಡಿ. 15 : ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯನ್ನು ವಶಪಡಿಸಿಕೊಂಡ ಖುಷಿಯಲ್ಲಿರುವ ಭಾರತವಿನ್ನು ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ. ಮೊದಲ ಪಂದ್ಯ ರವಿವಾರ ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ಇಲ್ಲಿ ಉತ್ತಮ ದಾಖಲೆ ಹೊಂದಿರುವ ಟೀಮ್ ಇಂಡಿಯಾ ಇದನ್ನು ಕಾಯ್ದುಕೊಳ್ಳುವ ಗುರಿಯೊಂದಿಗೆ ಹೋರಾಟಕ್ಕೆ ಇಳಿಯಲಿದೆ.
ಆದರೆ ಚೆನ್ನೈಯಲ್ಲೀಗ ಮಳೆ ಹಾಗೂ ಮೋಡದ ವಾತಾವರಣವಿದ್ದು, ಪಂದ್ಯಕ್ಕೆ ಅಡಚಣೆಯೊಡ್ಡಲೂಬಹುದು. ರಾತ್ರಿ ಸುರಿದ ಮಳೆಯಿಂದಾಗಿ ಶನಿವಾರ ಬೆಳಗಿನ ಅವಧಿಯ ಭಾರತದ ಅಭ್ಯಾಸ ರದ್ದುಗೊಂಡಿದೆ.
ಗಾಯಾಳುಗಳಿಂದ ಸಮಸ್ಯೆ ಇಲ್ಲ
ಸರಣಿಯ ಆರಂಭಕ್ಕೂ ಮೊದಲೇ ಭಾರತ ಇಬ್ಬರು ಆಟಗಾರರ ಸೇವೆಯನ್ನು ಕಳೆದುಕೊಂಡಿದೆ. ಎಡಗೈ ಆರಂಭಕಾರ ಶಿಖರ್ ಧವನ್ ಮತ್ತು ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಗಾಯಾಳಾಗಿ ಹೊರಬಿದ್ದಿದ್ದಾರೆ. ಆದರೆ ಇದರಿಂದ ಕೊಹ್ಲಿ ಪಡೆ ಆತಂಕಪಡುವ ಅಗತ್ಯವೇನೂ ಇಲ್ಲ. ಇವರಿಬ್ಬರ ಸ್ಥಾನವನ್ನು ತುಂಬಬಲ್ಲ ಸಮರ್ಥ ಆಟಗಾರರು ತಂಡದಲ್ಲಿದ್ದಾರೆ. ಅಲ್ಲದೇ ಧವನ್ ಮತ್ತು ಭುವನೇಶ್ವರ್ ಅವರ ಇತ್ತೀಚಿನ ಫಾರ್ಮ್ ಕೂಡ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದು ಗಮನಾರ್ಹ.
.

ಫ್ರೆಶ್ ನ್ಯೂಸ್

Latest Posts

Featured Videos