ಕಾರವಾರ : ಉ. ಕ.ಜಿಲ್ಲೆಯ ಕಾರವಾರದಲ್ಲಿ ಯೋಧನ ತಾಯಿಯ ಶವ ಸಂಸ್ಕಾರಕ್ಕೆ ಸ್ಥಳಿಯರ ವಿರೋಧ ವ್ಯಕ್ತ ಪಡಿಸಿರುವ ಘಟನೆ ತಾಜಾದಲ್ಲಿ ನಡೆದಿದೆ.
ಯೋಧ ಸುಮಿತ್ ಕುಮಾರನ ತಾಯಿ ಅನಿತಾ ದೇವಿ ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.
ಕಾರವಾರದ ಅರಗಾ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದರು. ತಾಯಿಯ ಅಂತ್ಯಕ್ರಿಯೆಗೆ ಹತ್ತಿರದ ರುದ್ರ ಭೂಮಿಯಲ್ಲಿ ಪರವಾನಿಗೆ ಪಡೆಯಲು ಹೋಗಿದ್ದರು. ಈ ವೇಳೆ ಇಲ್ಲಿನ ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.