ಇದೆಂಥಾ ನೀಚ ಕೃತ್ಯ

ಇದೆಂಥಾ ನೀಚ ಕೃತ್ಯ

ಮಧುಗಿರಿ: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೋಟೆ ಕಲ್ಲಪ್ಪನ ಪಾಳ್ಯದಲ್ಲಿ ಯುವಕನೊಬ್ಬ ದೇವರ ವಿಗ್ರಹದ ಮೇಲೆ ಚಪ್ಪಲಿ ಕಾಲಿಟ್ಟು ವಿಕೃತಿ ಮೆರೆದಿದ್ದಾನೆ. ಆ ಹೀನ ಕೃತ್ಯದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಡಿ.ವಿ.ಹಳ್ಳಿ ಸಮೀಪದ ಬೆಟ್ಟದ ಮೇಲಿನ ಶ್ರೀಕೋಟೆಕಲ್ಲಪ್ಪ ದೇವಸ್ಥಾನದ ಮೂಲ ವಿಗ್ರಹಕ್ಕೆ ದಬ್ಬೇಘಟ್ಟದ ಶ್ರೀಕಾಂತ ಎಂಬುವವನು ಮಂಗಳವಾರ ಬೆಳಗ್ಗೆ ಚಪ್ಪಲಿ ಕಾಲಿನಿಂದ ಒದ್ದು ವಿಕೃತವಾಗಿ ವರ್ತಿಸಿದ್ದಾನೆ. ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿಮಾರ್ಣವಾಗಿದೆ.

ಭಕ್ತರ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಯುವಕರ ತಂಡ ಆರೋಪಿಯನ್ನು ಬೆನ್ನತ್ತಿದರು, ಆತ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos