ತಿಮ್ಮಪ್ಪನ ಭಕ್ತರಿಗೆ: ಮಕ್ಮಲ್ ಟೋಪಿ

ತಿಮ್ಮಪ್ಪನ ಭಕ್ತರಿಗೆ: ಮಕ್ಮಲ್ ಟೋಪಿ

ಬೆಂಗಳೂರು, ಡಿ. 14 : ತಿಮ್ಮಪ್ಪನ ಹೆಸರಿನಲ್ಲಿ ಭಕ್ತರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಖದೀಮನನ್ನು  ತಿಮ್ಮಪ್ಪನ ಭಕ್ತರೇ ಹಿಡಿದು ಬೆಂಗಳೂರಿನ ಬಸವನ ಗುಡಿ ಪೊಲೀಸ್ ಠಾಣೆಗೆ ಹಿಡಿದುಕೊಟ್ಟಿದ್ದಾರೆ. ಆರೋಪಿ ರಾಘವೇಂದ್ರ. ಮೋಸ ಮಾಡಿ ತಲೆ ಮರಿಸಿಕೊಂಡಿದ ಆರೋಪಿ ರಾಘವೇಂದ್ರ ಮತ್ತೆ ಅದೇ ಚಾಳಿ ಮುಂದುವರೆಸಿ ತಿಮ್ಮಪ್ಪ ಉಂಡೆ ಕೊಡುವ ನೆಪದಲ್ಲಿ ತಿರುಪತಿಯ ಭಕ್ತಾದಿಗಳನ್ನು ಟಾರ್ಗೆಟ್ ಮಾಡಿ ಹಣ ಪಡೆದು ಮೋಸ ಮಾಡುತ್ತಿದ್ದನು. ಮೋಸ ಮಾಡಿ ತಲೆ ಮರಿಸಿಕೊಂಡಿದ್ದ ಆರೋಪಿ ರಾಘವೇಂದ್ರ ಬೆಂಗಳೂರಿಗೆ ಆಗಮಿಸಿ ತಿಮ್ಮಪ್ಪನ ಭಕ್ತರಿಗೆ ಮಕ್ಮಲ್ ಟೋಪಿ ಹಾಕಲು ಮುಂದಾಗಿದ್ದನು.
ತಿಮ್ಮಪ್ಪನ ಹೆಸರಿನಲ್ಲಿ ಭಕ್ತರಿಗೆ ಮಹಾಮೋಸ ಮಾಡಿರುವ ಖದೀಮನನ್ನು ಭಕ್ತರೇ ಹಿಡಿದು ಬಸವನಗುಡಿ ಪೊಲೀಸ್ ಠಾಣೆಗೆ ಹಿಡಿದುಕೊಟ್ಟಿದ್ದಾರೆ. ಈ ಹಿಂದೆ ಮೋಸ ಹೋಗಿದ್ದ ಭಕ್ತರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ರಾಘವೇಂದ್ರ ಮೂಲತಃ ಆಂಧ್ರ ಪ್ರದೇಶದವನಾಗಿದ್ದು, ತಿರುಪತಿಗೆ ಹೋಗುವ ಭಕ್ತಾದಿಗಳನ್ನು ಟಾರ್ಗೆಟ್ ಮಾಡಿ ಹಲವು ಅಮೀಷಗಳನೊಡ್ಡಿ ಹಣ ಪಡೆದು ಮೋಸ ಮಾಡುತ್ತಿದ್ದನು. ಆರೋಪಿ ರಾಘವೇಂದ್ರ ಮೊದಲು ಭಕ್ತಾದಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ ನಾನು ತಿಮ್ಮಪ್ಪನ ಆಡಳಿತ ಮಂಡಳಿಯಲ್ಲಿ ಸದಸ್ಯ ಆಗಿದ್ದೇನೆ. ನಿಮಗೆ ನೇರವಾಗಿ ಸ್ವಾಮಿಯ ಪಾದಕ್ಕೆ ಕರೆದುಕೊಂಡು ಹೋಗಿ ದರ್ಶನ ಕೊಡಿಸುತ್ತೇನೆ. ಅಷ್ಟೇ ಅಲ್ಲದೆ ತಿರುಪತಿಯಲ್ಲಿ ನಿಮಗೆ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭಕ್ತಾದಿಗಳಿಗೆ ನಂಬಿಸುತ್ತಿದ್ದನು.
ವಿಶೇಷ ಎಂದರೆ ಬ್ರಾಹ್ಮಣ ಭಕ್ತಾದಿಗಳನ್ನು ಬಲೆಗೆ ಬೀಳಿಸಿಕೊಂಡು ಹಣ ಪಡೆದುಕೊಳ್ಳುತ್ತಿದ್ದನು. ಆರೋಪಿ ರಾಘವೇಂದ್ರನಿಗೆ ನಂಬಿ ತಿರುಪತಿಗೆ ಹೋಗುತ್ತಿದ್ದ ಭಕ್ತರು ಬರಿಗೈಯಲ್ಲಿ ಮನೆ ಬರುತ್ತಿದ್ದರು. ಸದ್ಯ ಆರೋಪಿ ರಾಘವೇಂದ್ರನ ವಿರುದ್ಧ ಬಸವನಗುಡಿಯಲ್ಲಿ ದೂರು ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos