ಆಂಧ್ರಪ್ರದೇಶ, ಜ. 14 : ಸಂಕ್ರಾಂತಿ ಹಬ್ಬವನ್ನು ಆಚರಿಸಲು ತವರುಮನೆ ತೆರಳಿದ್ದ ಮಹಿಳೆಯೊಬ್ಬರು ಅಪಘಾತಕ್ಕೆ ಬಲಿಯಾದ ದಾರುಣ ಘಟನೆ ಶ್ರೀಕಾಕುಲಮ್ ಜಿಲ್ಲೆಯ ಮಡ್ಡಿ ರಾಮುಡು ಪೇಟಾ ಗ್ರಾಮದಲ್ಲಿ ನಡೆದಿದೆ.
ಅಪಘಾತಕ್ಕೆ ಬಲಿಯಾದ ಮಹಿಳೆಯನ್ನು ಜಡ್ಡು ಕೃಷ್ಣವೇಣಿ(46) ಎಂದು ಗುರುತಿಸಲಾಗಿದೆ. ಈಕೆ ತನ್ನ ತವರು ಮನೆಯಾದ ಪಾಲಕೊಂಡಾ ಮಂಡಲ್ ಬಳಿಯಿರುವ ಎನ್ ಕೆ ರಾಜಾಪುರನ್ ಗ್ರಾಮಕ್ಕೆ ತೆರಳುತ್ತಿದ್ದಳು ಎಂದು ತಿಳಿದುಬಂದಿದೆ.