ವೈನ್ ಬಳಕೆ ದ್ರಾಕ್ಷಿಗೆ ಉತ್ತೇಜನ

ವೈನ್ ಬಳಕೆ ದ್ರಾಕ್ಷಿಗೆ ಉತ್ತೇಜನ

ದೊಡ್ಡಬಳ್ಳಾಪುರ: ವೈನ್ ತಯಾರಿಕೆಗೆ ಬಳಸುವ ದ್ರಾಕ್ಷಿ ಬೆಲೆ ಕೋವಿಡ್-೧೯ ಲಾಕ್‌ಡೌನ್ ಸಮಯದಲ್ಲಿ ಕುಸಿದಿದ್ದು ಈಗ ಚೇತರಿಕೆ ಕಂಡುಕೊಂಡಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು.

ತಾಲ್ಲೂಕಿನ ರಘನಾಥಪುರ ಸಮೀಪದ ಗ್ರೋವರ್ ವೈನ್ ಯಾರ್ಡ್ ವೈನ್ ತಯಾರಿಕಾ ಘಟಕಕ್ಕೆ ಮಂಗಳವಾರ ಭೇಟಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ವೈನ್ ತಯಾರಿಕಾ ಘಟಕಗಳಿಗೆ ವಿಶೇಷ ಅನುಮತಿ ನೀಡುವ ಮೂಲಕ ರೈತರ ದ್ರಾಕ್ಷಿ ಬೆಳೆಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ವೈನ್ ದ್ರಾಕ್ಷಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದರು.                                                                                                                                                                                                                                                                                                                                            ‘ಲಾಕ್‌ಡೌನ್ ಸಮಯದಲ್ಲಿ ದ್ರಾಕ್ಷಿ ಬೆಲೆ ತೀರಾ ಕುಸಿದಿತ್ತು. ಈ ಸಂದರ್ಭದಲ್ಲಿ ಅಂತರ ರಾಜ್ಯ ಮಾರಾಟ ಸೇರಿದಂತೆ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡುವಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ವೈನ್ ತಯಾರಿಕೆಗೆ ತನ್ನದೇ ಆದ ವಿಶಿಷ್ಟ ಪದ್ದತಿಗಳಿದ್ದು, ಹೆಚ್ಚು ಕಾಲ ಸಂಗ್ರಹಿಸಿಟ್ಟಷ್ಟು ಬೆಲೆ ಹೆಚ್ಚಾಗುತ್ತದೆ. ವೈನ್ ತಯಾರಿಕೆ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕೋವಿಡ್-೧೯ ಸೋಂಕು ಹರಡುವ ಹಿನ್ನೆಲೆಯಲ್ಲಿ ವೈನ್ ಹಾಗೂ ಮದ್ಯ ತಯಾರಿಕಾ ಘಟಕಗಳಲ್ಲಿ ಅನುಸರಿಸುತ್ತಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸ್ವಚ್ಛತೆ, ಕಾರ್ಮಿಕರ ಅಂತರ ಸೇರಿದಂತೆ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುತ್ತಿದೆ’ ಎಂದರು.

 

 

ಫ್ರೆಶ್ ನ್ಯೂಸ್

Latest Posts

Featured Videos