ಶಿಕ್ಷಕನ ನಿರ್ಲಕ್ಷೆ ಬೆಂಕಿಗೆ ಬಿದ್ದ ವಿದ್ಯಾರ್ಥಿ

ಶಿಕ್ಷಕನ ನಿರ್ಲಕ್ಷೆ ಬೆಂಕಿಗೆ ಬಿದ್ದ ವಿದ್ಯಾರ್ಥಿ

ಕೊರಟಗೆರೆ, ಮಾ. 19: ಶಾಲೆಯ ಮೈದಾನದಲ್ಲಿದ್ದ ಕಸಕ್ಕೆ ಬೆಂಕಿ ಇಟ್ಟು ನೋಡಿಕೊಳ್ಳದೆ ಶಿಕ್ಷಕನ ನಿರ್ಲಕ್ಷ್ಯ ಆಟವಾಡುತ್ತಿದ್ದ 2ನೇ ತರಗತಿ ವಿದ್ಯಾರ್ಥಿ ನಂದನ್ ಬಿನ್ ಹನುಮಂತರಾಜು ಬೆಂಕಿಗೆ ಬಿದ್ದ ಪರಿಣಾಮ ಕೈ, ಕಾಲು ಸುಟ್ಟು ತೀವ್ರ ಗಾಯವಾಗಿರುವ ಘಟನೆಯು ಕೊರಟಗೆರೆ ತಾಲೂಕಿನ ಯಾದಗೆರೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದಿದೆ.

ರಜೆ ಇದ್ದರೂ ಶಾಲೆಗೆ ಬಂದಿದ್ದ ಶಿಕ್ಷಕ ಕಸಕ್ಕೆ ಬೆಂಕಿ ಇಟ್ಟು ನಂದಿಸುವವರೆಗೆ ಇರದೆ ತೆರಳಿದ್ದೆ ಈ ಅನಾಹುತಕ್ಕೆ ಕಾರಣವಾಗಿದೆ ಬೇಜವಾಬ್ದಾರಿ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ನೊಂದ ಮಗುವಿನ ಪೋಷಕರ ಆಗ್ರಹಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos