ಸರ್ಕಾರದ ಉದ್ದೇಶ ಈಡೇರಲಿದೆ

ಸರ್ಕಾರದ ಉದ್ದೇಶ ಈಡೇರಲಿದೆ

ಚಿಕ್ಕನಾಯಕನಹಳ್ಳಿ: ಪೋಷಣ ಅಭಿಯಾನದಂತಹ ಸಮುದಾಯ ಕಾರ್ಯಕ್ರಮಗಳಿಂದ ಸರ್ಕಾರದ ಉದ್ದೇಶಗಳು ಈಡೇರಲಿದೆ ಎಂದು ಅಭಯಾನ ಸಂಚಾಲಕ ಸಂತೋಷ್‌ಕುಮಾರ್ ತಿಳಿಸಿದರು.
ಪಟ್ಟಣದ ಸ್ತ್ರೀಶಕ್ತಿಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನಡೆದ ಸಮಗ್ರ ಶಿಶು ಅಭವೃದ್ದಿಯೋಜನೆಯಡಿತಾಲ್ಲೂಕಿನಕುಪ್ಪೂರು ವೃತ್ತದ ಅಂಗನವಾಡಿಕಾರ್ಯಕರ್ತೆಯರಿಗೆ ಸ್ಮಾರ್ಟ್ಪೋನ್ ವಿತರಣಾಕಾರ್ಯಕ್ರಮದಲ್ಲಿಅವರು ಮಾತನಾಡಿಇಂಹತತರಬೇತಿ ಕಾರ್ಯಕ್ರಮಗಳಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಆರೋಗ್ಯ ತಪಾಸಣೆಯ ಜೊತೆಗೆ ಅಗತ್ಯ ಸಮಯದಲ್ಲಿ ಅವರಿಗೆ ಸಿಗಬೇಕಿರುವ ಪೋಷಣೆಗಳ ಕುರಿತು ಸಮಗ್ರ ಮಾಹಿತಿ ದೊರೆಯಲಿದೆ ಎಂದರು.
ಮೇಲ್ವಿಚಾರಕಿ ರೇಖಾ ಮಾತನಾಡಿ ಮೋಬೈಲ್ ಬಳಕೆಯಿಂದ ಯೋಜನೆಗಳ ಮಾಹಿತಿ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಮತ್ತುದಕ್ಷತೆ, ಪ್ರಗತಿ ಹಾಗು ಕರ್ತವ್ಯದಲ್ಲಿನ ಪಾರದರ್ಶಕತೆಯ ಸಚಿತ್ರಮಾಹಿತಿದೊರೆಯಲಿದೆ ಎಂದರು. ರವಿಕುಮಾರ್ ಮಾತನಾಡಿ ಮನೆಮನೆ ಭೇಟಿಯಿಂದ ಅಪೌಷ್ಠಿಕ ಮಕ್ಕಳನ್ನು ಗುರುತಿಸುವುದು ಹಾಗೂ ಅವರ ಸಮಗ್ರ ವಿವರಗಳನ್ನು ಆಯಾಕಾಲಕ್ಕೆ ಪರಿಶೀಲಿಸುವ ನಿಟ್ಟಿನಲ್ಲಿ ಈ ಸ್ಮಾರ್ಟ್ಫೋನ್ ಹೆಚ್ಚು ಸಹಾಯಕವೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಭಿಯಾನದ ಯೋಜನಾ ಸಹಾಯಕರಾದ ರವಿಕುಮಾರ್ ಆರ್.ದಯಾನಂದ್, ಮೇಲ್ವಿಚಾರಕಿ ಸೌಮ್ಯ, ಆರ್.ಬಿ. ಶಿವಪ್ರಸಾದ್ ಮುಂತಾದವರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos