ರಾಮಮಂದಿರ ರಾಷ್ಟ್ರಮಂದಿರ : ಶ್ರೀರಾಮುಲು

ರಾಮಮಂದಿರ ರಾಷ್ಟ್ರಮಂದಿರ : ಶ್ರೀರಾಮುಲು

ರಾಯಚೂರು, ನ. 10 : ರಾಮಮಂದಿರ ನಿರ್ಮಾಣದ ತೀರ್ಪು ಯಾರ ಗೆಲುವು ಅಲ್ಲ. ಭಾರತದ ಗೆಲುವು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳಿದರು.
ರಾಮಮಂದಿರ ರಾಷ್ಟ್ರಮಂದಿರ ಆಗಬೇಕೆಂದು ಎಂದು ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ರಾಮನು ಒಂದು ಜಾತಿಗೆ ಸೀಮಿತವಲ್ಲ. ಹೀಗಾಗಿ ಅಯೋಧ್ಯೆಯ ರಾಮಮಂದಿರವು ರಾಷ್ಟ್ರ ಮಂದಿರ ಆಗಬೇಕೆಂದು ಸಚಿವರು ನುಡಿದರು.

ಭಾರತದಲ್ಲಿ ರಾಮ ಮಂದಿರದ ನಿರ್ಮಾಣದ ಬಗ್ಗೆ ಬಹುದಿನಗಳ ಬೇಡಿಕೆ ಇತ್ತು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಒಂದು ಜಾತಿ ಗೆಲುವು ಅಲ್ಲ ಎಂದ ಅವರು, ಬೇರೆ ಬೇರೆ ರಾಷ್ಟ್ರಗಳಲ್ಲಿ ರಾಮನನ್ನು ದೇವರೆಂದು ಪೂಜಿಸುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದು ಶ್ರೀರಾಮಲು ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos