ರೈತ ದ್ರೋಹ ಸೋಲು ಕಟ್ಟಿಟ್ಟ ಬುತ್ತಿ

ರೈತ ದ್ರೋಹ ಸೋಲು ಕಟ್ಟಿಟ್ಟ ಬುತ್ತಿ

ಹೊಸಕೋಟೆ: ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡದೆ ದ್ರೋಹವೆಸಗಿದ್ದು, ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ನಂದಗುಡಿ ಜಿಪಂ. ಸದಸ್ಯ ಸಿ. ನಾಗರಾಜ್ ತಿಳಿಸಿದರು.

ನಂದಗುಡಿ ಹೋಬಳಿಯ ದಳಸಗೆರೆ ಗ್ರಾಮದಲ್ಲಿ ಹೊಸಕೋಟೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಆಡಳಿತ ಮಂಡಳಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಳೆದ ೨೦ ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಎನ್. ಬಚ್ಚೇಗೌಡರ ಬೆಂಬಲಿತರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಾಲೂಕಿನ ರೈತರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲರಾಗಿ, ಆಡಳಿತ ಮಂಡಳಿ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ತಮಗಿಷ್ಟ ಬಂದವರಿಗೆ ಷೇರುಗಳನ್ನು ಮಾಡಿ ಚುನಾವಣೆ ಸಂದರ್ಭದಲ್ಲಿ ಅಕ್ರಮವೆಸಗಿ ಅಧಿಕಾರ ಪಡೆಯುತ್ತಿದ್ದಾರೆ.
ಇದೇ ೧೮ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ೧೧ ಸ್ಥಾನಗಳಿಗೆ ಸ್ಫರ್ಧಿಸಿದ್ದು, ಮತದಾರರು ಈ ಬಾರಿ ಬಿಜೆಪಿ ಪಕ್ಷದ ಬೆಂಬಲಿತರಿಗೆ ಮತ ನೀಡಿ ಅರ್ಶೀವಾದ ನೀಡುವ ಮೂಲಕ ೨೦ ವರ್ಷಗಳ ಕಾಲ ತೊಘಲಕ್ ದರ್ಬಾರ್ ನಡೆಸಿದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos