ಜೈಲಲ್ಲಿ ವ್ಯಕ್ತಿ ಸಾವು

ಜೈಲಲ್ಲಿ ವ್ಯಕ್ತಿ ಸಾವು

ಹೊಸಕೋಟೆ: ತಾಲ್ಲೂಕಿನ ಕಸಬಾ ಹೋಬಳಿಯ ಲಾಲ್ ಬಾಣ್ ದಾಸರಹಳ್ಳಿಯ ಲಕ್ಷ್ಮಯ್ಯ ಎಂಬುವರು ಗಾಂಜಾ ಕೇಸಲ್ಲಿ ಹೊಸಕೋಟೆ ಪೊಲೀಸರು ಆರೆಸ್ಟ್ ಮಾಡಿ ವಿಚಾರಣೆಯ ನಂತರ ಪರಪ್ಪನ ಅಗ್ರಹಾರ ಜೈಲಿಗೆ ಕಳುಸಿದ್ದರು.
ದಿನಾಂಕ ೨೩ ರಂದು ಜೈಲಿನಲ್ಲೆ ಆತ್ಮ ಅತ್ಯೆ ಮಾಡಿಕೊಂಡಿದ್ದು ಪೊಲೀಸರಿಂದಲೇ ನನ್ನ ಗಂಡ ಸತ್ತಿರೂದು ಎಂದು ನ್ಯಾಯಕ್ಕಾಗಿ ಹೊಸಕೋಟೆ ಪೊಲೀಸ್ ಠಾಣೆ ಮುಂದೆ ಕುಟುಂಬಸ್ಥರು ಧರಣಿ ನಡೆಸಿದರು.
ಮೃತ ಲಕ್ಷ್ಮಯ್ಯನ ಹೆಂಡತಿ ಶ್ಯಾಮಲಮ್ಮ ಮಾತನಾಡಿ ನಮ್ಮ ಮನೆಯಲ್ಲಿ ಪಲೀಸರು ತಪಾಸಣೆ ಮಾಡಿದಾಗ ಯಾವುದೇ ವಸ್ತುಗಳು ನಮ್ಮ ಮನೆಯಲ್ಲಿ ಸಿಗಲಿಲ್ಲ ಇತರೆ ಇಬ್ಬರ ಮನೆಗಳಲ್ಲಿ ಗಾಂಜಾ ಸಿಕ್ಕದ್ದದ್ದರೂ ಅವರನ್ನು ಬಿಟ್ಟು ಕಳುಹಿಸಿ ಅವರ ಕೇಸುಗಳನ್ನು ನನ್ನ ಗಂಡನ ಮೇಲೆ ಹಾಕಿ ಚಿತ್ರ ಹಿಂಸೆ ಕೊಟ್ಟು ಮರಾಣಾಂತಿಕ ಹಲ್ಲೆ ಮಾಡಿದ್ದಾರೆ.
ಸ್ಥಳ ತನಿಖೆಗೆ ಊರಿಗೆ ಕರೆ ತಂದಾಗ ನನ್ನ ಗಂಡ ನಾನು ಬದುಕಲಾರೆ ಪೊಲೀಸರು ಭಯಂಕರ ಹಿಂಸುಸುತ್ತಾರೆ. ನಿಮ್ಮನ್ನು ಬಿಡುವುದಿಲ್ಲ ನೀವೆಲ್ಲರು ವಿಷತೆಗದು ಕೊಂಡು ಸತ್ತೋಗಿ ಎಂದು ಹೇಳಿದ್ದರು.
೨ ಸಾವಿರ ಹಣವನ್ನು ಕೊಟ್ಟರೆ ಬಿಡುವುದಾಗಿ ಪೊಲೀಸರು ಕೇಳಿದರು. ಎಂದು ಶಾಮಲಮ್ಮ ಆರೋಪಿಸಿದರು. ಜೈಲು ಅಧಿಕಾರಿಗಳ ಪ್ರಕಾರ ಆರೋಪಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಸ್ವತ್ಥನಂತೆ ವರ್ತಿಸಿ ಕಾಲಿಗೆ ಹಾಕಿರುವ ಕೊಳ ಚೈನ್‌ನಿಂದ ಆತ್ಮ ಅತ್ಯಗೆ ಯತ್ನಿಸಿದ್ದು ಅತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಸತ್ತಿದ್ದಾನೆ ಎಂದು ಜೈಲು ಅಧಿಕಾರಿಗಳು ಎಫ್.ಐ.ಆರ್‌ನಲ್ಲಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos