ಡಿಕ್ಕಿ ಹೊಡೆದು ತಲೆಕೆಳಗಾಗಿ ಬಿದ್ದ ಬಸ್

 ಡಿಕ್ಕಿ ಹೊಡೆದು ತಲೆಕೆಳಗಾಗಿ ಬಿದ್ದ ಬಸ್

ತುಮಕೂರು:ಸೇತುವೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ತಲೆಕೆಳಗಾಗಿ ಬಿದ್ದ ಪರಿಣಾಮ ಮೂರಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿ ಗಾಯಗೊಂಡಿದ್ದು 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾನುವಾರ ರಾತ್ರಿ ಹೊಸಕೆರೆ-ಹೊವಿನ ಕಟ್ಟೆ ಮಾರ್ಗದಲ್ಲಿ ರಸ್ತೆಯಲ್ಲಿನ ಗೂಬೆಕಲ್ಲು ಹತ್ತಿರವಿರುವ ಸೇತುವೆಗೆ ಖಾಸಗಿ ಬಸ್ ಚಾಲಕ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದಿದೆ.
ಬಸ್‌ನಲ್ಲಿ 20 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು . ಗಂಭೀರವಾಗಿ ಗಾಯಗೊಂಡಿದ್ದ ಹೂವಿನಕಟ್ಟೆ ಅನಿತಾ(30), ಹೊಸಪಾಳ್ಯ ರಮೇಶ್ ( 35), ಕುರಿಕಾಟನಹಳ್ಳಿ ನಿಂಗಣ್ಣ ( 60) ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಕೆಳಗೆ ಸಿಕ್ಕಿಕೊಂಡಿದ್ದ ಕುಂಟರಾಮನಹಳ್ಳಿ ತ್ಯಾಗರಾಜ (30) ಮುಬಾರಕ್,(25) ಹಾಗೂ ಬಸ್ ಕ್ಲೀನರ್ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನ ಕಿಶೋರ್ (27)ನನ್ನು ಪೋಲಿಸರು, ಸಾರ್ವಜನಿಕರು ನೆರವಿನಲ್ಲಿ ಕಾಪಾಡಿದ್ದಾರೆ.
ಸಣ್ಣಪುಟ್ಟ ಗಾಯಗಳಾದ ಎಂಎನ್ ಕೋಟೆ ಗಂಗಮ್ಮ ( 60), ಮಂಚಲದೊರೆ ಶಂಕರಮ್ಮ (60), ಬೆಣಚಗೆರೆ ತಿಮ್ಮಯ್ಯ (55), ಯರಬಳ್ಳಿ ಹನುಮಂತಯ್ಯ(67), ಮುಚ್ಚವೀರನಹಳ್ಳು ನಾಗರಾಜ್ (48)_ ಮಂಚಲದೊರೆ ಬಸವರಾಜು (57), ಹೂವಿನಕಟ್ಟೆ ಜಯಮ್ಮ (57)ರನ್ನು ಹೊಸಕೆರೆ, ಚೇಳೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚೇಳೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳ ನೆರವಿಗೆ ನಿಂತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos