ತಮಿಳುನಾಡು: ಕೇಂದ್ರ ಸಚಿವ ವಿ ಸೋಮಣ್ಣ ಅವರು ಇಂದು (ಶುಕ್ರವಾರ ಮೇ 9) ರಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ತಾಲ್ಲೂಕಿನ ತಳಿ ಯೂನಿಯನ್ ನಲ್ಲಿರುವ ಮಲ್ಲಿಗುಡ್ಡೆ ಮಠದಲ್ಲಿ ಜರುಗಿದ ಶ್ರೀ ಶ್ರೀ ಶಿವಾನುಭವ ಚರಮೂರ್ತಿ ಶ್ರೀ ಮ.ನಿ.ಪ್ರ.ಸ್ವ ಗುರುನಂಜ ಮಹಾಸ್ವಾಮಿಗಳ ಗದ್ದುಗೆ ಮಠದ ನೂತನ ಕಟ್ಟಡದ ಉದ್ಘಾಟನಾ ಮಹೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ಕಟ್ಟಡದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ, ಶ್ರೀಮತಿ ಶೈಲಜಾ ಸೋಮಣ್ಣನವರು ಹಾಗೂ ಲಿಂ. ಶ್ರೀಮತಿ ಕೆಂಪಮ್ಮ ಮತ್ತು ಶ್ರೀ ವೀರಣ್ಣನವರ ಕುಟುಂಬವರ್ಗದವರು ಹಾಗೂ ಪರಮಪೂಜ್ಯರು, ಉಪಸ್ಥಿತರಿದ್ದರು.