ಕಣ್ಣೀರಿಟ್ಟ ಕನ್ನಡದ ನಟಿ

ಕಣ್ಣೀರಿಟ್ಟ ಕನ್ನಡದ ನಟಿ

ಬೆಂಗಳೂರು, ಡಿ. 06: ದಿಶಾ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳನ್ನ ಇಂದು ಮುಂಜಾನೆ ಎನ್ಕೌಂಟರ್ ಮಾಡಲಾಗಿದೆ. ಈಗ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಸಂತ್ರಸ್ತೆಗೆ ಈಗ ನ್ಯಾಯ ಸಿಕ್ಕಂತಾಯ್ತು ಎಂದು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

‘ಹೆಣ್ಣಾಗಿ ಹುಟ್ಟಿದ್ದಕ್ಕೆ ಭಯ ಶುರುವಾಗಿತ್ತು. ಹೆಣ್ಣಾಗಿ ಹುಟ್ಟಿದ್ದು ತಪ್ಪಾ? ಎಂಬ ಪ್ರಶ್ನೆ ನನ್ನ ಕಣ್ಣೆದುರು ಪದೇ ಪದೇ ಬರೋಕೆ ಶುರುವಾಗಿತ್ತು. ದೈಹಿಕ ಅತ್ಯಾಚಾರವಲ್ಲದೆ ಪ್ರತಿನಿತ್ಯ ಮಾನಸಿಕ ಅತ್ಯಾಚಾರ ನಡೆಯುತ್ತಿದೆ. ಏನು ಮಾಡಬೇಕು ಅಂತ ಗೊತ್ತಾಗಲ್ಲ. ನಮ್ಮ ಪ್ರಪಂಚದಲ್ಲಿ ಇರುವಂತಹ ಹೆಣ್ಣು ಹೆತ್ತಂತಹ ಪ್ರತೊಯೊಬ್ಬ ತಂದೆ ತಾಯಿಯ ಶಾಪ, ನೋವು ಕಣ್ಣಿರು, ಕೋಪ ಎಲ್ಲಾ ತಟ್ಟಿತು ಅಂತ ಅನ್ಸುತ್ತೆ. ಆ ಪಿಶಾಚಿಗಳನ್ನು ಅದೇ ಜಾಗದಲ್ಲಿ ಎನ್ ಕೌಂಟರ್ ಮಾಡಿದ್ದಾರೆ. ತುಂಬಾ ಖುಷಿಯಾಗ್ತಾ ಇದೆ. ಇಡೀ ಪೊಲೀಸ್ ತಂಡಕ್ಕೆ ಸೆಲ್ಯೂಟ್ ಮಾಡ್ತೀನಿ.’ ಎಂದು ವಿಡಿಯೋ ಮೂಲಕ ಸಂತಸದಿಂದ ಕಂಬನಿ ಮಿಡಿಯುತ್ತಾ ಅದಿತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

 

ಫ್ರೆಶ್ ನ್ಯೂಸ್

Latest Posts

Featured Videos