ಸುರೇಶ್ ಅಂಗಡಿಗೆ ಗಾಳಿಪುತ್ರ ಹೆಸರಿಟ್ಟಿದ್ದೇವೆ: ಸತೀಶ್ ಜಾರಕಿಹೊಳಿ

ಸುರೇಶ್ ಅಂಗಡಿಗೆ ಗಾಳಿಪುತ್ರ ಹೆಸರಿಟ್ಟಿದ್ದೇವೆ: ಸತೀಶ್ ಜಾರಕಿಹೊಳಿ

ಬೆಳಗಾವಿ, . 9, ನ್ಯೂಸ್ ಎಕ್ಸ್ ಪ್ರೆಸ್ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆಲುವು ದಾಖಲಿಸುತ್ತಿರುವ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿಗೆ ಗಾಳಿಪುತ್ರ ಎಂದು ಹೆಸರಿಟ್ಟಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.

2005ರ ಚುನಾವಣೆಯಲ್ಲಿ ವಾಜಪೇಯಿ ಅಲೆಯಲ್ಲಿ, 2009ರಲ್ಲಿ ಯಡಿಯೂರಪ್ಪ ಅವರ ಅಲೆಯಲ್ಲಿ ಹಾಗೂ 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಅಂಗಡಿ ಗೆಲುವು ದಾಖಲಿಸಿದ್ದಾರೆ. 3 ಬಾರಿಯೂ ಅವರ ಸ್ವಂತ ಸಾಮರ್ಥ್ಯದಿಂದ ದಾಖಲಿಸಿದ ಗೆಲುವಲ್ಲ ಎಂದು ಕಾಲೆಳೆದರು.

ದೇಶದಲ್ಲಿ ಈ ಸಲ ರಾಹುಲ್ ಗಾಂಧಿ ಅಲೆ ಇದೆ. ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ. ಬಿಜೆಪಿಯ 2 ಅಭ್ಯರ್ಥಿಗಳಿಗೆ ಈ ಸಲ ಮುಖಭಂಗವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಅಭ್ಯರ್ಥಿಗಳು ಸ್ಪರ್ಧೆಗೆ ಮುಂದಾಗಿದ್ದಾರೆ ಎಂಬ ಸುರೇಶ ಅಂಗಡಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಎಂಇಎಸ್ ಮೊದಲಿನಿಂದಲೂ ಬಿಜೆಪಿ ಪರ ಇದೆ. ಬಿಜೆಪಿ ಮಾತನ್ನೇ ಮರಾಠಿ ಭಾಷಿಕರು ಕೇಳುತ್ತಾರೆ. ಎಂಇಎಸ್ ಸ್ವತಂತ್ರವಾಗಿದ್ದು, ಅವರೇ ಸ್ಪರ್ಧೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos