ಕಾಲೋನಿಗಳ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ

ಕಾಲೋನಿಗಳ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ

ಶಿರಾ: ಬಿಜೆಪಿ ಬೆಂಬಲಿಸಿ ಡಾ.ಸಿ.ಎಂ.ರಾಜೇಶ್ ಗೌಡರನ್ನು ಗೆಲ್ಲಿಸಿದರೆ ಉಳಿಕೆ ಇರುವ ಎರಡುವರೆ ವರ್ಷದಲ್ಲಿ ಕಾಲೂನಿಗಳ ಆಭಿವೃದ್ಧಿಗೆ ಹೆಚ್ಚು ಅಧ್ಯತೆ ನೀಡಲಿದ್ದಾರೆ. ಕಾಂಗ್ರೆಸ್ ದಲಿತರನ್ನು ಮತಬ್ಯಾಂಕ್ ಆಗಿ ಬಳಸಿ ಕೊಂಡು ನಿರ್ಲಕ್ಷ ಮಾಡಿದೆ ಎಂದು ಉಪಮುಖ್ಯಮಂತ್ರಿ ದಲಿತ ನಾಯಕ ಗೋವಿಂದ ಕಾರಜೋಳ ಹೇಳಿದರು.
ಶಿರಾ ತಾಲೂಕಿನ ಕಾಮಗೊಂಡನಹಳ್ಳಿ, ಸಿದ್ದನಹಳ್ಳಿ, ವೀರಗಾನಹಳ್ಳಿ, ಹೆಂದೊರೆ, ಗುಂಡಪ್ಪಚಿಕ್ಕೇನಹಳ್ಳಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಇದಲ್ಲದೇ ಸರ್ಕಾರ ಅಲೆಮಾರಿಗಳು ಬಡವರು ಗುಡಿಸಲಿನಲ್ಲಿ ವಾಸಿಸುವುದನ್ನು ಮನವರಿಕೆ ಮಾಡಿ ಕೊಂಡು ೨೯೬೭. ಮನೆಗಳನ್ನು ಶಿರಾ ಕ್ಷೇತ್ರಕ್ಕೆ ನೀಡಿದೆ. ಕ್ಷೇತ್ರದಲ್ಲಿ ಬಿಜೆಪಿ ಪರ ಜನಬೆಂಬಲ ವ್ಯಕ್ತವಾಗುತ್ತಿದ್ದು ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.
ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ ಮಹಿಳೆಯರು, ಯುವಕರು, ರೈತರು ಸೇರಿದಂತೆ ಎಲ್ಲಾ ಸಮುದಾಯಗಳ ಜನ ನನ್ನ ನಿರೀಕ್ಷೆಗೂ ಮಿರಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮತ ನೀಡಿದರೆ ಉಳಿಕೆ ಅವಧಿಗೆ ಪ್ರತಿಪಕ್ಷದಲ್ಲಿ ಕುಳಿತು ಕಾಲಾಹರಣ ಮಾಡ ಬೇಕಾಗುತ್ತದೆ. ಬಿಜೆಪಿ ಸರ್ಕಾರ ಆಡಳಿತವಿದೆ ನನಗೆ ಮತ ನೀಡಿ ಗೆಲ್ಲಿಸಿದರೆ ತಕ್ಷಣ ಆಭಿವೃದ್ಧಿ ಚುರುಕುಗೊಳ್ಳಲಿದೆ ಕೊಟ್ಟ ಮಾತನಂತೆ ಮದಲೂರು ಕೆರೆ ಹೇಮಾವತಿ ನೀರಿ ನಿಂದ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ, ನಿಮ್ಮ ನಂಬಿಕೆ ಆರ್ಹನಾಗಿ ಕೆಲಸ ಮಾಡಿ ತೊರಿಸುತ್ತೆನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos