ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕ ಸ್ಥಾನಕ್ಕೆ ವಿಜಯಪುರ ಜಿಲ್ಲೆಯ ಪ್ರತಿನಿಧಿಯಾಗಿ ಆಯ್ಕೆ ಬಯಸಿ ಮುದ್ದೇಬಿಹಾಳ ಪಟ್ಟಣದ ದಿ ಕರ್ನಾಟಕ ಕೋ.ಆಪರೆಟಿವ್ ಬ್ಯಾಂಕ್ ನಿರ್ದೇಶಕ ವೆಂಕನಗೌಡ ಎಸ್. ಪಾಟೀಲ ಬೆಂಗಳೂರಿನಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದರು. ಧುರೀಣರಾದ ಸಿದ್ದರಾಜ ಹೊಳಿ, ಪ್ರಭುದೇವ ಕಲಬುರ್ಗಿ, ಗುರುಲಿಂಗಪ್ಪಗೌಡ ಪಾಟೀಲ, ಅಖಂಡಮೂರ್ತಿ (ಅಪ್ಪು) ಪೂಜಾರಿ ಇದ್ದರು.