ಹುಬ್ಬಳ್ಳಿ, ಮೇ . 14 : ಹುಬ್ಬಳ್ಳಿ ಮಂದಿಗೆ ಡಬ ಡಬ ಎಂದು ಆತಂಕ ಮತ್ತಷ್ಟು ಜಾಸ್ತಿಯಾಗಿದೆ, ಆಹಾರ ಧಾನ್ಯ ಹಂಚಿದ ಹಿನ್ನಲೆ ಇತನಿಗೂ ಕೊರೊನಾ ವಕ್ಕರಿಸಿದೆ. ಹುಬ್ಬಳ್ಳಿಯ ಡಾಕಪ್ಪ ವೃತ್ತದಿಂದ ಕಾಳಮ್ಮನ ಅಗಸಿಯವರೆಗೆ ಆಹಾರ ದಾನ್ಯ ಹಂಚಿದ್ರು ಪುಣ್ಯಾತ್ಮರು…! ಆತನೊಂದಿಗೆ ಆಹಾರ ಪಡೆದ ಬಡಪಾಯಿಗಳ ಗತಿ ಏನಪ್ಪ ದೇವ್ರೆ ಎಂಬ ಆತಂಕ ಇದೀಗ ಶುರುವಾಗಿದೆ.
ಹುಬ್ಬಳ್ಳಿಯ ವಿವಿಧ ಕಡೆ ರೋಗಿ ನಂಬರ್ 236 ಆಹಾರ ಹಂಚಿದ್ದ…! ಆತನಿಂದ ಸ್ಮಶಾನ ಕಾವಲುಗಾರನಾಗಿರೊನಿಗೋ ಸೋಂಕು ತಗುಲಿ ಇದೀಗ ರೋಗಿ ನಂಬರ್ 363. ಎಂದು ಗುರುತಿಸಲಾಗಿದೆ. ಇದೀಗ ಯಾರ.ಯಾರು ಆ ಸೋಂಕಿತರಿಂದ ಆಹಾರ ಪಡಿದಿದ್ರೋ ಅವರನ್ನೆಲ್ಲಾ ಪತ್ತೆಹಚ್ಚಿ ಅವನ್ನು ಪರೀಕ್ಷೆಗೆ ಒಳಪಡಿಸ ಬೇಕೆಂದು ಧಾರವಾಡ ಜಿಲ್ಲಾಧಿಕಾರಿ ದೀಪಾಚೋಳನ್ ಸೂಚಿಸಿದ್ದಾರೆ. ಒಟ್ಟಾರೆ ಹುಬ್ಬಳ್ಳಿ ಮಂದಿ ಇನ್ನಾದ್ರೂ ಹೆಚ್ಚೆತ್ತುಕೊಳ್ಳದಿದ್ದಲ್ಲಿ ಇಂತಹ ಪ್ರಕರಣಗಳು ಮತ್ತಷ್ಟು ಜಾಸ್ತಿ ಆಗೋದ್ರಲ್ಲಿ ಅನುಮಾನವೇ ಇಲ್ಲಾ..!