ರಾಮನ ಭಾವಚಿತ್ರಕ್ಕೆ ನಮಿಸಿ ಸಂಭ್ರಮ

  • In State
  • August 5, 2020
  • 259 Views
ರಾಮನ ಭಾವಚಿತ್ರಕ್ಕೆ ನಮಿಸಿ ಸಂಭ್ರಮ

ಬೆಂಗಳೂರು: ಅಯೋಧ್ಯೆ ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಹಿನ್ನೆಲೆ ರಾಮನ ಭಾವಚಿತ್ರಕ್ಕೆ ಸಿಂಗಸಂದ್ರ ವಾರ್ಡಿನ ಬಿಜೆಪಿ ಮುಖಂಡ ಕೇಬಲ್ ಶ್ರೀನಿವಾಸ್ ರೆಡ್ಡಿ ಅವರು ಪುಷ್ಪಾರ್ಚನೆ, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಹಿಂದೂಗಳಲ್ಲಿ, ರಾಮನ ಭಕ್ತರಲ್ಲಿ ಸಂಭ್ರಮವೋ ಸಂಭ್ರಮ. ಈ ಐತಿಹಾಸಿಕ ದಿನಕ್ಕೆ ಮಾಜಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸಿಂಗಸಂದ್ರ ವಾರ್ಡಿನ ಬಿಜೆಪಿ ಮುಖಂಡ ಕೇಬಲ್ ಶ್ರೀನಿವಾಸ್ ರೆಡ್ಡಿ, ಸಿಂಗಸಂದ್ರ ವಾರ್ಡಿನ ಜನತೆ, ರಾಮನ ಭಕ್ತರು ಸಾಕ್ಷಿಯಾಗಿದ್ದರು.

ಸಿಂಗಸಂದ್ರ ವಾರ್ಡಿನಲ್ಲಿ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಹಾಲಿನ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಹಿಂದೂಗಳಿಗೆ ಈ ದಿನ ಐತಿಹಾಸಿಕ ದಿನ. ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿರುವುದು ಸಂತಸ ತಂದಿದ್ದು, ನೂರಾರು ವರ್ಷಗಳ ಹೋರಾಟ, ಬಲಿದಾನ, ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಕೋಟ್ಯಾಂತರ ಹಿಂದೂಗಳಿಗೆ, ರಾಜ್ಯದ ಸಂಪೂರ್ಣ ಜನತೆಗೆ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಮೂಲಕ ನರೇಂದ್ರ ಮೋದಿ ಅವರ ೩೦ ವರ್ಷಗಳ ಶಪಥ ನೆರವೇರಿದಂತಾಗಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos