ಅಪ್ಪನ ಬುದ್ಧಿವಾದಕ್ಕೆ ಆತ್ಮಹತ್ಯೆಗೆ ಶರಣಾದ ಮಗ!

ಅಪ್ಪನ ಬುದ್ಧಿವಾದಕ್ಕೆ ಆತ್ಮಹತ್ಯೆಗೆ ಶರಣಾದ ಮಗ!

ಮೈಸೂರು : ತಂದೆ ಹಾಗೂ ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿಯಲ್ಲಿ ನಡೆದಿದೆ.

ಹರೀಶ್ ಹಾಗೂ ವೆಂಕಟೇಶ್ ಆತ್ಮಹತ್ಯೆಗೆ ಶರಣಾದ ಅಣ್ಣ-ತಮ್ಮಂದಿರು. ಹರೀಶ್ ಟ್ರ‍್ಯಾಕ್ಟರ್ ಚಾಲಕನಾಗಿದ್ದ. ರ್ಯಾಷ್ ಆಗಿ ಟ್ರ‍್ಯಾಕ್ಟರ್ ಓಡಿಸಬೇಡ ಎಂದು ತಂದೆ ಮಗನಿಗೆ ಬುದ್ಧಿ ಹೇಳಿದ್ದಾರೆ.

ಅಲ್ಲದೇ ಅಣ್ಣ ವೆಂಕಟೇಶ್ ಕೂಡ ತಮ್ಮನಿಗೆ ಬುದ್ಧಿ ಹೇಳಿದ್ದಾನೆ. ಅಪ್ಪ ಬುದ್ಧಿ ಹೇಳಿದ್ದು ಮಾತ್ರವಲ್ಲ, ಪ್ರೀತಿಯ ಅಣ್ಣನೂ ತನಗೆ ಬೈದು ಬುದ್ಧಿ ಹೇಳಿದನಲ್ಲ ಎಂಬು ಬೇಸರಗೊಂಡ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಮ್ಮ ಆತ್ಮಹತ್ಯೆಗೆ ಶರಣಾದ ವಿಷಯ ಕೇಳಿದ ಅಣ್ಣ ವೆಂಕಟೇಶ್, ಸಹೋದರನ ಸಾವಿಗೆ ತನ್ನ ಮಾತೇ ಕಾರಣ ಎಂದು ನೊಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos