ನಿದ್ರೆಗೆ ಜಾರಿದ ಸಿಎಂ ಬಿಎಸ್ ವೈ , ಬೊಮ್ಮಾಯಿ

ನಿದ್ರೆಗೆ ಜಾರಿದ ಸಿಎಂ ಬಿಎಸ್ ವೈ , ಬೊಮ್ಮಾಯಿ

ಬೆಂಗಳೂರು,ಡಿ. 14 : ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಮೀನುಗಾರರ ಸಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೇದಿಕೆಯಲ್ಲೇ ಗಡದ್ದಾಗಿ ನಿದ್ರೆಗೆ ಜಾರಿದರು. ಸಿಎಂ ತೂಕಡಿಸಲು ಆರಂಭಿಸಿದ ಕೂಡಲೆ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಜೊತೆಯಾದರು.
ಮೀನುಗಾರರ ಸಮಾವೇಶದ ವೇದಿಕೆಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ತೂಕಡಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಯಡಿಯೂರಪ್ಪನವರ ಸಾಲಿನಲ್ಲೇ ಕುಳಿತಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಈ ವೇಳೆ ನಿದ್ರೆಗೆ ಜಾರಿದರು. ಮೀನುಗಾರ ಸಮುದಾಯದ ನಾಯಕರು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಎದುರು ಪ್ರಸ್ತಾಪಿಸುತ್ತಿದ್ದರೆ ಸಿಎಂ ಮಾತ್ರ ನಿದ್ರಾಲೋಕದಲ್ಲಿ ವಿಹರಿಸುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos