ಮೈಸೂರು,ನ. 21 : ಆಪರೇಷನ್ ಕಮಲ ಮಾಡಲು ಬಿಜೆಪಿಗೆ ದುಡ್ಡು ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಅನರ್ಹ ಶಾಸಕ ಎಂಟಿಬಿ ನನಗೆ ಸಾಲ ಕೊಟ್ಟಿಲ್ಲ, ಆಪರೇಷನ್ ಕಮಲ ಮಾಡಲು ಬಿಜೆಪಿಗೆ ದುಡ್ಡು ಕೊಟ್ಟಿದ್ದಾರೆ. ಇನ್ನೂ ನಾನು ಎಂಟಿಬಿ ನಾಗರಾಜ್ನಿಂದ ಸಾಲನೇ ಪಡೆದಿಲ್ಲ, ಪಡೆದಿಲ್ಲದ ಮೇಲೆ ವಾಪಸ್ಸು ಕೊಡುವುದು ಏನನ್ನು.? ಕೃಷ್ಣಭೈರೇಗೌಡ ಸಾಲ ಪಡೆದಿದ್ದ.ಅವನು ವಾಪಸ್ಸು ಕೊಟ್ಟಿದ್ದಾನೆ ಎಂದು ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟನೆ ಕೊಟ್ಟರು.
ಉಪ ಚುನಾವಣೆ ಹಿನ್ನಲೆ ನಾನು ಕೆ.ಆರ್. ಪೇಟೆಗೆ ಹೋಗುತ್ತಿದ್ದೇನೆ. ನಿರೀಕ್ಷೆಗೂ ಮೀರಿ ಜನರ ಸ್ಪಂದನೆ ಸಿಕ್ಕಿದೆ. ಅನರ್ಹರ ಬಗ್ಗೆ ಜನರೇ ಚರ್ಚೆ ಮಾಡುತ್ತಿದ್ದಾರೆ. ಅವರು ಹಣದಾಸೆಗೆ ಹೋಗಿದ್ದಾರೆ ಅಂತಾ ಅವರೇ ಹೇಳುತ್ತಿದ್ದಾರೆ ಎಂದು ನುಡಿದರು.