ಇಳಕಲ್: ಮಹಾಲಿಂಗಪೂರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕ ಸಿದ್ದು ಸವದಿ ತಮ್ಮದೇ ಪಕ್ಷದ ಮಹಿಳಾ ಸದಸ್ಯೆಯ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಇಳಕಲ್ ನಗರದ ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮಹಿಳೆಯರಿಗೆ ಗೌರವ ಸ್ಥಾನ ಮಾನಗಳನ್ನು ಕೊಡಲಾಗಿದೆ ಅದರಲ್ಲಿ ಕರ್ನಾಟಕ ಸಂಸ್ಕೃತಿಯು ದೇಶಕ್ಕೆ ಮಾದರಿಯಾಗಿದೆ. ಅದು ವಿಶ್ವಗುರು ಬಸವಣ್ಣನವರ ನಾಡಿನಲ್ಲಿ ರಸ್ತೆಯ ಮೇಲೆ ಮಹಿಳೆಯರಿಗೆ ಎಳೆದಾಡುವುದು ವಿಷಾದನೀಯ. ಇಂತಹ ಘಟನೆಯು ಎಲ್ಲಿಯೂ ನಡೆಯಬಾರದು. ಆದರೆ ಜವಾಬ್ದಾರಿಯುತ ಶಾಸಕರಾಗಿ ಒಬ್ಬ ಮಹಿಳೆಯ ಮೇಲೆ ದೌರ್ಜನ್ಯವೆಸಗಿರುವದು ನಾಚಿಕೆಗೇಡಿನ ಸಂಗತಿಯಾಗಿದ್ದು, ಪಕ್ಷಭೇದ ಮರೆತು ಈ ಘಟನೆಯನ್ನು ಖಂಡಿಸುವದಾಗಿ ತಿಳಿಸಿದರು.