ಸಿದ್ದೇಶ್ವರ್ ಪುತ್ರಿ ಕೊರೋನಾ ದಿಂದ ಪಾರು

ಸಿದ್ದೇಶ್ವರ್ ಪುತ್ರಿ ಕೊರೋನಾ ದಿಂದ ಪಾರು

 ದಾವಣಗೆರೆ. ಏ. 9 : ಕೊರೊನಾ ಸೋಂಕಿಗೆ ಒಳಗಾಗಿದ್ದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಪುತ್ರಿ ಅಶ್ವಿನಿ ಇದೀಗ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಮೂಲದಿಂದ ತಿಳಿದುಬಂದಿದೆ.
ಗಯಾನಾ ದೇಶದಿಂದ ಮಾ.20ರಂದು ಭಾರತಕ್ಕೆ ಬಂದಿದ್ದ ಅಶ್ವಿನಿ ಕ್ವಾರಂಟೈನಲ್ಲಿದ್ದರು. ಬಳಿಕ ಕೊರೊನಾ ಟೆಸ್ಟ್ ಮಾಡಿಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ತಕ್ಷಣ ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos