ಬೆಂಗಳೂರು, ನ. 8 : ಕುರುಬರನ್ನು ಒಟ್ಟುಗೂಡಿಸಿ ಸಮಾವೇಶ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಮಾಜಿ ಸಚಿವ ಹೆಚ್.ಎಂ.ರೇವಣ್ಣರನ್ನ ಮುಂದೆ ಬಿಟ್ಟಿದ್ದಾರೆನ್ನಲಾಗಿದೆ.
ಅಮೆರಿಕಾದಲ್ಲಿ ಕುರುಬ ಸಮುದಾಯದ ಸಮಾವೇಶ ನಡೆಸಲು ಚಿಂತನೆ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ವೀರಶೈವ, ಒಕ್ಕಲಿಗರ ಸಮಾವೇಶ ನಡೆದಿದ್ದು, ಅದಕ್ಕೆ ಸೇರಿದ ಸಂಘಗಳೂ ಇದೆ. ಇದೀಗ ಕುರುಬ ಸಮುದಾಯದವರ ಸಮಾವೇಶ ಮಾಡಿ, ಸಂಘ ಕಟ್ಟಲು ಕಾಂಗ್ರೆಸ್ ನಿರ್ಧರಿಸಿದ್ದು, ರೇವಣ್ಣ ಅಲ್ಲಿನ ಸಮುದಾಯದವರ ಜೊತೆ ಮಾತುಕತೆ ನಡೆಸಲಿದ್ದಾರೆ.