ಆ ಶಾಸಕನನ್ನು ನೋಡಿ ಫುಲ್ ಗರಂ ಆಗಿದ್ಯಾಕೆ ರಾಜಾ ಹುಲಿ ಸಿಎಂ…?

ಆ ಶಾಸಕನನ್ನು ನೋಡಿ ಫುಲ್ ಗರಂ ಆಗಿದ್ಯಾಕೆ ರಾಜಾ ಹುಲಿ ಸಿಎಂ…?

ಕೊಪ್ಪಳ, ಜ. 31: ನಿನ್ನೆ ತಡರಾತ್ರಿ ದೆಹಲಿಯಲ್ಲಿರುವ ಕರ್ನಾಟಕ  ಭವನದಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಸಿಎಂ ಕಣ್ಣಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಅವರನ್ನು ಕಂಡ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೋಪಗೊಂಡಿದ್ದಾರೆ ಎನ್ನಲಾಗಿದೆ. ಯಾಕೆ ನೀನು ದೆಹಲಿಗೆ ಬಂದಿದ್ದು? ಯಾರು ನಿನಗೆ ಬರೋಕೆ ಹೇಳಿದ್ದು ಎಂದು ಶಾಸಕರಿಗೆ ಪ್ರಶ್ನೆ ಮಾಡಿದ್ದಾರಂತೆ. ಸಚಿವ ಸ್ಥಾನ ಕೊಡಬೇಕಾದರೆ ಯಾವ ದಂಡನೆ ಇರಬೇಕು ಎಂಬುದು ನಿನಗೆ ಗೊತ್ತಾ? ಸಚಿವ ಸ್ಥಾನ ಕೇಳಬೇಕಾದರೆ ಮೊದಲು ನೀನು ಯಾರಿಗೆ ಭೇಟಿಯಾಗಬೇಕೆಂದು ಎಂದು ಕೇಳಿದ್ದರಂತೆ?ರಾಜ್ಯ ಹುಲಿ.

ಸಿಎಂರ ಈ ಎಲ್ಲ ಪ್ರಶ್ನೆಗಳಿಗೆ ಶಾಸಕರು ತುಟಿ ಪಿಟಿಕ್ ಅನ್ನದೇ ಮೌನವಾಗಿ ನಿಂತಿದ್ದಾರೆ?.

ಹೋಗಿ ಮೊದಲು ನಿನ್ನ ಕ್ಷೇತ್ರದ ಜನರ ಗೋಳು ಕೇಳಿ ಎಂದು ಸಿಎಂ ಗದರಿದ್ದಾರೆ.ಇಷ್ಟೆಲ್ಲ ಘಟನೆಗಳು ಆದ ತಕ್ಷಣವೇ ಶಾಸಕರು ದೆಹಲಿಯಿಂದ ನೇರವಾಗಿ ಕರ್ನಾಟಕದ ಕಡೆ ಪ್ರಯಾಣ ಮಾಡಿದ್ದಾರೆ. ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿ ಬೆಂಗಳೂರಿನಿಂದ ತಮ್ಮ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿ ಇಂದು ಆಗಮಿಸಿದ್ದಾರೆ.

ಒಂದು ಕಡೆ, ನನಗೂ ಬೇಕು ಸಚಿವ ಸ್ಥಾನ ಅಂತಾ ಮುಖ್ಯಮಂತ್ರಿ ಮೇಲೆ ಸಚಿವ  ಆಕಾಂಕ್ಷಿಗಳು ಒತ್ತಡ, ಮತ್ತೊಂದು ಕಡೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಎಲ್ಲ ‘ಅರ್ಹ’ ಶಾಸಕರಿಗೆ ಮಂತ್ರಿ ಸ್ಥಾನ ಕಲ್ಪಿಸಲು ಒದ್ದಾಡುತ್ತಿರೋ ರಾಜಾ ಹುಲಿ?.

ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ಆಶ್ಚರ್ಯಕರ ಸಂಗತಿಯೊಂದು ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ. ಅದೇನಂದರೆ, ಯಲಬುರ್ಗಾ ಬಿಜೆಪಿ ಶಾಸಕ ಹಾಲಪ್ಪ ಆಚಾರ್ ಗೆ  ಮಂತ್ರಿಗಿರಿ ಸಿಗೋದು ಪಕ್ಕಾ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿಯೆಂಬಂತೆ ನಿನ್ನೆ ದೆಹಲಿ ಬಿಜೆಪಿ ವರಿಷ್ಠರಿಂದ ಶಾಸಕ ಹಾಲಪ್ಪ ಆಚಾರ್ ಗೆ ಬುಲಾವ್ ಬಂದಿದೆ ಎನ್ನಲಾಗಿದೆ? ಬುಲಾವ್ ನಿಂದ ಶಾಸಕರು ನಿನ್ನೆ ಸಿಎಂ ಮುಂದೆ ಪ್ರತ್ಯಕ್ಷರಾಗಿದ್ದಾರೆ.

ಹಾಲಪ್ಪ ಹಾಲು ಕುಡಿದಷ್ಟೇ ಸಂತೋಷದಿಂದ ದೆಹಲಿ ವಿಮಾನ ಹತ್ತಿದ್ದಾರೆ. ಮೋಸ್ಟ್ಲೀ ಹಾಲಪ್ಪ ಆಚಾರ್ ಹೆಸರು ಉಳಿದೆಲ್ಲರಿಗಿಂತಲೂ ಮೊದಲೇ ಸಚಿವರ ಪಟ್ಟಿಯಲ್ಲಿ ಅಚ್ಚಾಗೋದು ಗ್ಯಾರಂಟಿ ಅಂತಾ ಹೇಳಲಾಗುತ್ತಿದೆ.

ಇನ್ನು ಸಿಎಎ ಕಾರ್ಯಕ್ರಮಕ್ಕೆಂದು ಅಮಿತ್ ಶಾ ಅವರು ಬೆಂಗಳೂರಿಗೆ ಬಂದಾಗಲೇ ತಮ್ಮ ಜೇಬಿನಿಂದ ತೆಗೆದು ಬಿ ಎಸ್ ವೈ ಕೈಗಿಟ್ಟ ಪಟ್ಟಿಯಲ್ಲಿ ಹಾಲಪ್ಪ ಆಚಾರ್ ಅವರ ಹೆಸರಿತ್ತು! ಇದನ್ನು ಕಂಡು ಸ್ವತ: ಸಿಎಂ ಬಿಎಸ್ ವೈನೇ ಆಶ್ಚರ್ಯಚಕಿತರಾಗಿದ್ದರು!

ಹಾಲಪ್ಪಗೆ ಸಚಿವ ಸ್ಥಾನ ಏಕೆ?

ಹಾಗೆ ನೋಡಿದರೆ ಹಾಲಪ್ಪ ಆಚಾರ್ ಮೊದಲ ಬಾರಿಗೆ ಶಾಸಕರಾದೋರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶ ಪಡೆದವರು. ಹಾಲಪ್ಪ ಬೇರೆಯವರಿಗೆ ಹೋಲಿಸಿದರೆ ಜ್ಯೂನಿಯರ್ ಇರಬಹುದು. ಯಾಕೆಂದರೆ, ಬಿಜೆಪಿಯಲ್ಲಿ ಮೂರು-ನಾಲ್ಕು ಬಾರಿ ಗೆದ್ದು ಬಂದ ಶಾಸಕರಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆಲ್ಲ ಮಂತ್ರಿ ಸ್ಥಾನಮಾನ ಕೋಡೋಕಾಗಿಲ್ಲ. ಅಂಥದ್ದರಲ್ಲಿ ಹಾಲಪ್ಪ ಆಚಾರ್ ಗೆ ಮಂತ್ರಿ ಸ್ಥಾನ ನೀಡೋದರ ಹಿಂದೆ ಮುಖ್ಯವಾದ ಎರಡು ಕಾರಣಗಳಿವೆ.

ಹಾಲಪ್ಪ ಆಚಾರ್ ಪಕ್ಷ ಹೇಳಿದ ಕೆಲಸ ಕಾರ್ಯಗಳನ್ನು ಬಹಳ ಶೀಘ್ರವಾಗಿ ಅದು ಅಚ್ಚುಕಟ್ಟಾಗಿ ಕೆಲಸವನ್ನು ನಿರ್ವಹಿಸಿ ಹೈಕಮಾಂಡ್ ಪ್ರೀತಿಗೆ ಪಾತ್ರರಾದೋರು. ಅದಕ್ಕೆ ಆರ್ ಎಸ್ ಎಸ್ ಮುಖಂಡ ಬಿ.ಎಲ್. ಸಂತೋಷ್ ಕೊಡೋ ಕಾರಣ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ. ಹಾಲಪ್ಪ ತಮ್ಮ ಕ್ಷೇತ್ರ ಯಲಬುರ್ಗಾದಲ್ಲಿ ಎಲ್ಲರಿಗಿಂತಲೂ ಅಧಿಕವಾಗಿ ಬಿಜೆಪಿ ಸದಸ್ಯತ್ವ ಮಾಡಿಸಿ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇನ್ನು ಹಳೆ ಹುಲಿ ಬಸವರಾಜ ರಾಯರೆಡ್ಡಿಯವರನ್ನು ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ. ಈ ಎಲ್ಲ ಮಾನದಂಡಗಳಿಂದ ಹಾಲಪ್ಪ ಆಚಾರ್ ಗೆ ಸಚಿವ ಸ್ಥಾನ ಒಲಿದು ಬರೋದು ಪಕ್ಕಾ ಆಗಿದೆ. ಆದರೆ, ಬಿಜೆಪಿ ಪಕ್ಷದೊಳಗಿರೋ ಅನೇಕರಿಗೆ ಈ ವಿಚಾರ ಅಪಥ್ಯವಾಗಿದೆ.

ವರದಿಗಾರರು, ಮಲ್ಲು

ಫ್ರೆಶ್ ನ್ಯೂಸ್

Latest Posts

Featured Videos