ಹೊಸಕೋಟೆ, ಡಿ. 10: ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಬಿಜೆಪಿ ಅಭ್ಯರ್ಥಿ ಎಂಟಿಬಿ ವಿರುದ್ಧ ಅತ್ಯಧಿಕ ಮತಗಳಿಂದ ಗೆದ್ದಿದ್ದಾರೆ. ಹೀಗಾಗಿ ಅಭಿಮಾನಿಗಳು, ಕಾರ್ಯಕರ್ತರು ಸಿಹಿಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸುತ್ತಿದ್ದರು. ಗೆದ್ದ ಖುಷಿಗೆ ಪಟಾಕಿ ಸುಡುವ ವೇಳೆ ಅದೇ ಊರಿನ ಕೆಲ ಗ್ರಾಮಸ್ಥರು ಪಟಾಕಿಯನ್ನು ದೂರ ಹೊಡೆಯಿರು, ಕಾರುಗಳು ಇವೆ, ಸುಟ್ಟುಹೋಗುತ್ತವೆ ಎಂದು ಹೇಳಿದ್ದೇ ತಡ ಶರತ್ ಬೆಂಬಲಿಗರು ದಿಢೀರ್ ಅಂತ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹೀಗಾಗಿ ಶರತ್ ಬೆಂಬಲಿಗರ ಆಕ್ರೋಶಕ್ಕೆ ಕೆಲವರ ತಲೆಬುರಡೆ ಬಿಚ್ಚಿಕೊಂಡಿದ್ದು, ಕೆಲವರಿಗೆ ಕೈಕಾಲುಗಳು ಊನವಾಗಿವೆ. ಅಲ್ಲಿಯೇ ಇರುವ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದು ಕೇವಲ ಇವತ್ತಿನ ವಿಚಾರವಲ್ಲ ಪ್ರತಿ ಚುನಾವಣೆ ಬಂದಾಗಲೆಲ್ಲ ಗೆದ್ದ ಮೇಲೆ ಬೆಂಬಲಿಗರು ಸುಮಾರು 10ಕ್ಕಿಂತ ಹೆಚ್ಚು ಭಾರಿ ಇದೇ ರೀತಿ ದಾಂಧಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರನ್ನು ಕೊಟ್ಟಿದ್ರು ಸಹಾ ಏನು ಪ್ರಯೋಜನವಾಗಿಲ್ಲ. ಏನಾದರು ಕೇಳಲು ಹೋದರೆ ನೀವು ಶರತ್ ಗೆ ಓಟ್ ಹಾಕಿಲ್ಲ. ಬದಲಿಗೆ ಎಂಟಿಬಿ ನಾಗರಾಜ್ ಗೆ ಮತ ಹಾಕಿದ್ದೀರಿ ಎಂದು ದಾಂಧಲೆ ನಡೆಸುತ್ತಿದ್ದಾರೆ. ಇದರಿಂದ ಅಲ್ಲಿನ ಗ್ರಾಮಸ್ಥರಿಗೆ ಒಂದು ರೀತಿಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.
ಶರತ್ ಬೆಂಬಲಿಗರ ಕೋಪ ಕೇವಲ ಅಲ್ಲಿನ ಜನರಿಗೆ ಮಾತ್ರವಲ್ಲದೆ ವಾಹನದ ಮೇಲೂ ಕೋಪ ತೋರಿಸಿ ಕಲ್ಲಿನಿಂದ ಜಜ್ಜಿ ಗ್ಲಾಸ್ ಹೊಡೆದು ಹಾಕಿದ್ದಾರೆ. ಹೀಗಾಗಿ ಹೋಮಿನಿ ಕಾರ್ ಜಖಂ ಆಗಿದೆ.