ತಾವಾಗೇ ಪೊಲೀಸರಿಗೆ ಶರಣಾದ ರೌಡಿಶೀಟರ್ಸ್

ತಾವಾಗೇ ಪೊಲೀಸರಿಗೆ ಶರಣಾದ ರೌಡಿಶೀಟರ್ಸ್

ಬೆಂಗಳೂರು, ಮಾ. 06: ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕೊಲೆ, ಸುಲಿಗೆಗಳು ಹಾಡುಹಗಲೇ ನಡೆಯುತ್ತಿದೆ.

ಹೌದು ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಒಂದು ಕೊಲೆಯ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಹೋಗಿ 5 ರೌಡಿಶೀಟರ್ ಗಳು ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ರೌಡಿಶೀಟರ್ ಸ್ಲಂ ಭರತ್ ಎನ್ಕೌಂಟರ್ ಆಗಿದ್ದು, ಇದರಿಂದ ಭಯಗೊಂಡ ವಾಂಟೆಡ್ ರೌಡಿಶೀಟರ್ಗಳು ತಾವಾಗೇ ಬಂದು ಪೊಲೀಸರಿಗೆ ಶರಣಾಗಿದ್ದಾರೆ.

ಮಧು ಅಲಿಯಾಸ್ ಸ್ಲಂ ಮಧು, ವಿನಯ್ ಕುಮಾರ್, ಅಜಯ್, ಮುನಿರಾಜು ಹಾಗೂ ಕರಿಯ ಸತೀಶ್ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಶರಣಾಗಿರುವ ರೌಡಿಶೀಟರ್ಸ್.

ಈ 5 ಜನರ ವಿರುದ್ಧ ರಾಜಗೋಪಾಲನಗರದಲ್ಲಿ 10 ಪ್ರಕರಣಗಳಿದ್ದವು. ಇದರಲ್ಲಿ ಮಧು ಎನ್ನುವಾತ ಸ್ಲಂ ಭರತನ ಶಿಷ್ಯನಾಗಿದ್ದು, ಆತನ ಜೊತೆ ಸೇರಿ ಹಲವಾರು ಕೇಸ್ಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಅಲ್ಲದೇ ವಿನಯ್ ನಂದಿನಿ ಎಂಬ ಮಹಿಳೆಯ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಹಾಗೇ ಅಜಯ್ ಹಾಗೂ ವಿನಯ್ ಹಲವಾರು ಕೊಲೆ ಕೇಸ್ನಲ್ಲಿ ಬೇಕಾಗಿದ್ದವರು. ಮುನಿರಾಜು ಹಾಗೂ ಸತೀಶ್ ವಿರುದ್ಧವೂ ಹಲವಾರು ಕೇಸ್ಗಳು ದಾಖಲಾಗಿದ್ದವು.

ಇವರೆಲ್ಲಾ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ರೌಡಿ ಶೀಟರ್ಗಳಾಗಿದ್ದು, ಸ್ಲಂ ಭರತನ ಎನ್ಕೌಂಟರ್ ಬಳಿಕ ಹೆದರಿ ತಾವಾಗಿಯೇ ಬಂದು ಶರಣಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos