ರಾಯಚೂರು,ಜು. 2 : ಕೊರೊನಾ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಮಂತ್ರಾಲಯ ಮಠಕ್ಕೆ ಭಕ್ತರ ಭೇಟಿಗೆ ನೀಡಲಾಗಿದ್ದ ಅವಕಾಶವನ್ನು ಮುಂದೂದಡಲಾಗಿದೆ. ರಾಯರ ಮಠದಲ್ಲಿ ಜುಲೈ 2 ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ಮಂತ್ರಾಲಯ ಮಠ ತಿಳಿಸಿತ್ತು.
ಆದ್ರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಶ್ರೀಮಠದಿಂದ ಮತ್ತೊಂದು ಪ್ರಕಟಣೆ ಬಿಡುಗಡೆಯಾಗಿದೆ. ಸದ್ಯ, ಮಠದಲ್ಲಿ ಆನ್ಲೈನ್ ಸೇವೆಗಳು ದೊರೆಯುತ್ತಿದ್ದು, ಭಕ್ತರು ಆನ್ಲೈನ್ ಪೂಜೆ, ಸೇವೆಗಳನ್ನು ಪಡೆಯಬಹುದಾಗಿದೆ. ಶ್ರೀರಾಘವೇಂದ್ರ ಸ್ವಾಮಿಗಳ 349ನೆಯ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಅಗಸ್ಟ್ 4 ರಂದು ಪೂರ್ವಾರಾಧನೆ, ಅಗಸ್ಟ್ 5ರಂದು ಮಧ್ಯಾರಾಧನೆ, ಅಗಸ್ಟ್ 6ರಂದು ಉತ್ತರಾಧನೆಗೆ ತಯಾರಿ ಹಾಗೂ ರಥೋತ್ಸವ ನಡೆಯಲಿದೆ.