ರಾಜು ಕಾಗೆಯಿಂದ ಸಿಎಂ ಹೆಚ್.ಡಿ.ಕೆ.ಯ ಜನಾಂಗೀಯ ನಿಂದನೆ..!

ರಾಜು ಕಾಗೆಯಿಂದ ಸಿಎಂ ಹೆಚ್.ಡಿ.ಕೆ.ಯ ಜನಾಂಗೀಯ ನಿಂದನೆ..!

ಬೆಳಗಾವಿ, ಏ. 16, ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್- ಕಾಂಗ್ರೆಸ್​ ನಾಯಕರು ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ ಮೇಕಪ್ ಮಾಡಿಕೊಂಡು ಫೋಟೋಶೂಟ್ ಮಾಡಿಸುತ್ತಾರೆ, ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಾರೆ ಎಂಬ ವಿಷಯದ ಬಗ್ಗೆಯೇ ಮಾತನಾಡುತ್ತಾರೆ. ಮೋದಿ ಬೆಳ್ಳಗೆ, ಸುಂದರವಾಗಿದ್ದಾರೆ. ಹಾಗಾಗಿ, ಅವರೇನೇ ಮಾಡಿದರೂ ಚೆನ್ನಾಗೇ ಕಾಣುತ್ತದೆ. ಆದರೆ, ಸಿಎಂ ಕುಮಾರಸ್ವಾಮಿ 100 ಬಾರಿ ಮೈ ತೊಳೆದುಕೊಂಡರೂ ಎಮ್ಮೆ ತರಾನೇ ಕಾಣುತ್ತಾರೆ ಎಂದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಿಕ್ಕೋಡಿಯ ಕಾಗವಾಡದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಏಕವಚನದಲ್ಲೇ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಜು ಕಾಗೆ ಜನಾಂಗೀಯ ನಿಂದನೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಮೋದಿ ಮೇಕಪ್ ಮಾಡಿಕೊಂಡು ಕ್ಯಾಮೆರಾ ಮುಂದೆ ಬರುತ್ತಾರೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಸಿಎಂ ಬಣ್ಣದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸುಮಲತಾ ಅಂಬರೀಶ್ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿಚಾರವಾಗಿಯೂ ಪ್ರಸ್ತಾಪಿಸಿರುವ ಮಾಜಿ ಶಾಸಕ ರಾಜು ಕಾಗೆ, ಸುಮಲತಾ ಅಂಬರೀಶ್ ಮನೆಯ ವಿಚಾರ ಕುಮಾರಸ್ವಾಮಿಗೆ ಯಾಕೆ ಬೇಕು? ಅಂಬರೀಶ್ ಸತ್ತಾಗ ಸುಮಲತಾ ಮನೆಯಲ್ಲಿರಲಿಲ್ಲ. ಅಂಬರೀಶ್ ಹೆಣವನ್ನು ನಾನು ಮಂಡ್ಯಕ್ಕೆ ಸಾಗಿಸಿದೆ ಎಂಬೆಲ್ಲ ಹೇಳಿಕೆಗಳನ್ನು ಕುಮಾರಸ್ವಾಮಿ ಯಾಕೆ ಕೊಡುತ್ತಾರೆ? ಎಂದು ಅಸಮಾಧಾನ ಹೊರಹಾಕಿದ್ದಾರೆ. ನಾವು ಹೆಣ್ಣುಮಕ್ಕಳಿಗೆ ಬಹಳ ಗೌರವ ನೀಡುತ್ತೇವೆ, ಪರಸ್ತ್ರೀಯರನ್ನು ತಾಯಿಯ ಸ್ಥಾನದಲ್ಲಿಡುತ್ತೇವೆ. ಆದರೆ, ಕುಮಾರಸ್ವಾಮಿ ಸುಮಲತಾ ಅವರಿಗೆ ಗಂಡ ಸತ್ತವಳು ಎಂದೆಲ್ಲ ಹೀಯಾಳಿಸಿದ್ದಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚುನಾವಣಾ ಪ್ರಚಾರದ ವೇಳೆ ತಾವು ಗೆದ್ದರೆ ರಾಜ್ಯಕ್ಕೆ ಏನು ಮಾಡುತ್ತಾರೆಂದು ಹೇಳಿಕೊಳ್ಳಲಿ. ಅದುಬಿಟ್ಟು ಅಂಬರೀಶ್​ ಮನೆ ವಿಚಾರ ಇವರಿಗ್ಯಾಕೆ? ಎಂದು ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos