ಮಳೆ : ಸಂಚಾರ ಸೇವೆ ಕಡಿತ

ಮಳೆ : ಸಂಚಾರ ಸೇವೆ ಕಡಿತ

ಕಾಗವಾಡ : ಮಹಾರಾಷ್ಟçದ ಕೊಂಕಣ ಘಟ್ಟದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ನೀರಿನಲ್ಲಿ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಿಸಿದೆ. ಇದ್ದರಿಂದ ಮತ್ತೆ ಉಗಾರ-ಕುಡಚಿ ಮಧ್ಯದ ಸೇತುವೆ ಪುನಃ ನೀರಿನಲ್ಲಿ ಮುಳುಗಿದೆ. ಇದ್ದರಿಂದ ಕಾಗವಾಡ-ಜಮಖಂಡಿ ಮಾರ್ಗದ ಎಲ್ಲ ಸಂಚಾರ ಸೇವೆ ಕಡಿತಗೊಂಡಿದೆ.

ರವಿವಾರ ರಾತ್ರಿ ಮತ್ತೆ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿದ್ದು, ಕುಡಚಿ-ಉಗಾರ ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪ್ರಯಾಣಿಕರು ಹಾರೂಗೇರಿಯಿಂದ ಅಥಣಿ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.

ಕಳೆದ ವಾರದಲ್ಲಿ ಕೃಷ್ಣಾ ನದಿಗೆ ಬಂದಿರುವ ಮಹಾಪೂರ ನೀರಿನ ಪ್ರಮಾಣ ಇಳಿಮುಖವಾಗಿತ್ತು. ಆದರೆ, ಕೊಂಕಣ ಘಟ್ಟದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನದಿಯಲ್ಲಿ ಏಕ ಕಾಲಕ್ಕೆ 5 ಅಡಿ ನೀರು ಹೆಚ್ಚಿಸಿದೆ. ಇದ್ದರಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಸಿದ್ದು, ಸೇತುವೆ ನೀರಿನಲ್ಲಿ ಮುಳುಗಿದೆ.

ಫ್ರೆಶ್ ನ್ಯೂಸ್

Latest Posts

Featured Videos