ವಿಜಯಪುರ: ಜಿಲ್ಲೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಗೊಂಧಳಿ ಸಮಾದವರಿಗೆ ಸೂರು ಹಾಗೂ ನಿಗಮದಿಂದ ಸಾಲ ಸೌಲಭ್ಯ ಕಲ್ಪಿಸಲು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲಾ ಗೋಂಧಳಿ ಸಮಾಜ ಅಲೇಮಾರಿ ಹಾಗೂ ಅರೆ ಅಲೇಮಾರಿ ಸಂಘದ ಅದ್ಯಕ್ಷರಾದ ಸುರೇಶ ಗರುಡಕರ ಕಳೆದ 2018-19 ಹಾಗೂ 2019-20ನೇ ಸಾಲಿನಲ್ಲಿ ದೇವರಾಜ ಅರಸು ನೇರ ಸಾಲ ಯೋಜನೆ ಅಡಿಯಲ್ಲಿ ಕೊಟ್ಟಂತ ಸಾಲವನ್ನು ಮನ್ನಾ ಮಾಡಬೇಕು. 2020-21ರಲ್ಲಿ ಕೊರೋನಾ ಮಹಾಮಾರಿ, ದೊಡ್ಡ ನಿರುದ್ಯೋಗ ಸಮಸ್ಯೆಯಿಂದ ಹಾಗೂ ನೆರೆ ಹಾವಳಿಯಲ್ಲಿ ಸಿಲುಕಿ ಅರ್ಥಿಕ ಸಂಕಪ್ಟ ಎದುರಾದ ನಮಗೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಕ್ಕೆ ನಿಗಮದಿಂದ ಬಂಡವಾಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು. ವಸತಿ ಇಲಾಖೆಯಿಂದ ಸೂರು ವ್ಯವಸ್ಥೆ ಮಾಡಬೇಕು. ನಮ್ಮ ಸಮುದಾಯವನ್ನು ಎಸ್.ಟಿ. ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.