ಭಾರತ ಮುಕ್ತಿ ಮೋರ್ಚಾ ಸಂಘಟನೆಯಿಂದ ಪ್ರತಿಭಟನೆ

ಭಾರತ ಮುಕ್ತಿ ಮೋರ್ಚಾ ಸಂಘಟನೆಯಿಂದ ಪ್ರತಿಭಟನೆ

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಭಾರತ ಮುಕ್ತಿ ಮೋರ್ಚಾ ಸಂಘಟನೆ ವತಿಯಿಂದ ಕಪ್ಪುಪಟ್ಟಿ ಧರಿಸಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ವಿವಿಧ ಬೇಡಿಕೆಗಳಾದ ಕಳೆದ ತಿಂಗಳ ಜುಲೈ ರಂದು ಮನವಿ ಪತ್ರ ಸಲ್ಲಿಸಿದರು, ಬೇಡಿಕೆಗಳು ಕೊಡಲೇ ಈಡೇರಿಸುತ್ತೇನೆಂದು ಹೇಳಿ ಸಾರ್ವಜನಿಕ, ಮಾದ್ಯಮ ಮಿತ್ರರ ಅಧಿಕಾರಿಗಳ ಸಮ್ಮುಖದಲ್ಲಿ ಭರವಸೆ ನೀಡಿದ್ದೀರಿ, ಆದರೆ ಆ ಬೇಡಿಕೆಗಳು ಈಡೇರದ ಕಾರಣ ಸಾರ್ವಜನಿಕರ ಅಭಿವೃದ್ಧಿಯ ಹಿತದೃಷ್ಠಿಯಿಂದ ಕೊರಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಘೇರಾವ್ ಹಾಕುವುದರ ಮೂಲಕ ಆಗ್ರಹ ಪಡಿಸಿದರು.
ಸೇಡಮ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸಾರ್ವಜನಿಕ ಗ್ರಂಥಾಲಯ ತೆರೆಯಬೇಕು, ಎಸ್.ಟಿ.ಹಾಸ್ಟೆಲ್ ನಿಡಗುಂದಾ ಗ್ರಾಮಕ್ಕೆ ಸ್ಥಳಾಂತರ, ಕೆ.ಇ.ಬಿ ಹತ್ತಿರವಿರುವ ಕಂದಾಯ ಕಚೇರಿ ಬಸ್ ನಿಲ್ದಾಣದ ಹತ್ತಿರ ಸ್ಥಳಾಂತರಿಸಬೇಕು, ಪ್ರವಾಸಿ ಮಂದಿರ ಮೇಲ್ದರ್ಜೆಗೆರಿಸಬೇಕು, ಎಂದು ರಾಜಕುಮಾರ ಪಾಟೀಲ್ ಸಹಕಾರಿ ಸಂಘ ಅಧ್ಯಕ್ಷ ಮನವಿ ಸಲ್ಲಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos