ಶ್ರಾವಣ ಮಾಸದ ವಿಶೇಷ ಪೂಜೆ

  • In State
  • August 10, 2020
  • 206 Views
ಶ್ರಾವಣ ಮಾಸದ ವಿಶೇಷ ಪೂಜೆ

ಕೊಟ್ಟೂರು : ಶ್ರಾವಣ ಮಾಸದ ಪ್ರಯುಕ್ತ ಶ್ರೀ ಕಲ್ಲೇಶ್ವರ ಸೇವಾ ಸಮಿತಿಯವರು ಇಟ್ಟಿಗಿ ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಸಿದರು.

ಈ ವರ್ಷ ಕೊರೋನಾದಿಂದ ಆದಷ್ಟು ಬೇಗನೆ ಸಂಕಷ್ಟದಿಂದ ಜನರನ್ನು ರಕ್ಷಿಸು. ನಮ್ಮ ಈ ಭಾಗದಲ್ಲಿ ಸಮೃದ್ಧ ಮಳೆಯಾಗಲಿ. ಉತ್ತಮ ಬೆಳೆಯಾಗಲಿ, ಉತ್ತಮ ಬೆಳೆಗೆ ಬೆಂಬಲ ಬೆಲೆ ಸಿಗಲಿ ಈ ದೇಶದ ಅನ್ನದಾತ ರೈತನ ಜೀವನ ಸುಖಕರವಾಗಿರಲಿ ಎಂದು ಗುರು ಬಸವರಾಜ ಕಲ್ಲೇಶ್ವರ ದೇವರಲ್ಲಿ ಪ್ರಾರ್ಥಿಸಿದರು.

ಶ್ರಾವಣ ಸೋಮವಾರದ ವಿಶೇಷ ಪೂಜೆ, ರುದ್ರಾಭಿಷೇಕ, ಸಂಕಲ್ಪ ಮಹಾಮಂಗಳಾರತಿಯಲ್ಲಿ ಯಾವುದೇ ಅಡೆತಡೆಯಿಲ್ಲದೇ ನಿರ್ವಿಘ್ನವಾಗಿ ನಡೆಯಿತು. ಈ ಸಮಯದಲ್ಲಿ ಸೇವಾರ್ಥಿಗಳಾದ ಗೂಳೆಜ್ಜ, ಅಡೆಗೌಡ್ರ ಸುಭಾಸ್, ಕನ್ನಿಹಳ್ಳಿ ಕೊಟ್ರೇಶ, ಮಲ್ಲಿಕಾರ್ಜುನ, ಹಾಲೇಶ, ಶಿವಮೂರ್ತಿ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos