ಪೊಲೀಸ್ ಅಧಿಕಾರಿ ಎಸಿಬಿ ಬಲೆಗೆ

ಪೊಲೀಸ್ ಅಧಿಕಾರಿ ಎಸಿಬಿ ಬಲೆಗೆ

ಕೆ.ಆರ್.ಪೇಟೆ,ಅ. 22 : ಬಡ ರೈತನಿಂದ ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಕೆ.ಆರ್.ಪೇಟೆಯಲ್ಲಿ ಜಮೀನು ಸ್ವಾಧೀನಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ರೈತರೊಬ್ಬರು ಮನವಿ ಮಾಡಿದ್ದಾರೆ. ಎರಡ್ಮೂರು ತಿಂಗಳು ಮನವಿ ಮಾಡಿದರೂ ಎಎಸ್ ಐ ಮಾತ್ರ ರಕ್ಷಣೆ ಕೊಡಲಿಲ್ಲ. ಕೊನೆಗೆ 30 ಸಾವಿರ ಲಂಚ ಕೊಟ್ಟರೆ ಮಾತ್ರ ರಕ್ಷಣೆ ಕೊಡೋದಾಗಿ ಎಎಸ್ ಐ ಈರೇಗೌಡ ಹೇಳಿದ್ದಾರೆ. ಬಡ ರೈತ ಸಾಲ ಮಾಡಿ ಹಣ ಹೊಂದಿಸಿದ್ದಾರೆ. 22 ಸಾವಿರ ಹಣ ಲಂಚವಾಗಿ ರೈತ ಕೊಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಎಎಸ್ ಐ ಈರೇಗೌಡ ರನ್ನು ಬಂಧನ ಮಾಡಿದ್ದಾರೆ. ರೈತನ ಜಮೀನಿಗೆ ರಕ್ಷಣೆ ನೀಡುವಂತೆ ತಹಸೀಲ್ದಾರ್ ಗ್ರಾಮಾಂತರ ಪೊಲೀಸರಿಗೆ ಪತ್ರ ಬರೆದಿದ್ದರು. ಆದರೂ ಎಎಸ್ ಐ ರೈತನಿಂದ ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos