ಕೊಲಂಬೊ, ಜ. 01: ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಸೈನ್ಯಕ್ಕೆ ಆಯ್ಕೆಯಾಗಿ ಸುದ್ದಿಯಾಗಿದ್ದರು. ಇದೀಗ ಶ್ರೀಲಂಕಾ ಸರ್ಕಾರವು ಸೈನ್ಯದ ಗಜಾಬ ರೆಜಿಮೆಂಟ್ನಲ್ಲಿ ತಿಸಾರ ಪೆರೆರಗೆ “ಮೇಜರ್’ ಗೌರವ ಹುದ್ಧೆ ನೀಡಿದೆ. “ಸೈನ್ಯದ ಲೆಫ್ಟಿನೆಂಟ್ ಜನರಲ್ ಶಾವೇಂದ್ರ ಸಿಲ್ವ ಆಹ್ವಾನ ನೀಡಿದ್ದಾರೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಧನ್ಯವಾದಗಳು ಸರ್ ನಿಮಗೆ, ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. ಆರ್ಮಿ ಕ್ರಿಕೆಟ್ಗೆ ಉತ್ತಮ ಹೆಸರು ತಂದು ಕೊಡುವೆ’ ಎಂದು ಕ್ರಿಕೆಟಿಗ ತಿಸಾರ ಪೆರೆರ ಪ್ರತಿಕ್ರಿಯಿಸಿದ್ದಾರೆ.