ಚಾಮರಾಜನಗರ: ತಡ ರಾತ್ರಿ ಕಳುವಾಗಿದ್ದ ೫೦ ಲ್ಷ ರೂ ಮೌಲ್ಯದ ಪಾನ್ ಮಸಾಲಾ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಪಾಳ್ಯ ಗ್ರಾಮದಲ್ಲಿರುವ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರ ಪಾನ್ ಮಸಾಲಾ ಗೋಡನ್ನಲ್ಲಿ ತಡರಾತ್ರಿ ಸಂಗ್ರಹಿಸಿದ್ದ ಪಾನ್ ಮಸಾಲಾವನ್ನು ಕಳ್ಳರು ಕಳುವು ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.
ದಾಖಲಾದ ದೂರಿನನ್ವಯ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯನ್ನು ತಮಿಳುನಾಡಿನ ಧರ್ಮಪುರಿಯಲ್ಲಿ ಬಂಧಿಸಿದ್ದಾರೆ.
ಸೋಮವಾರ ಬೆಳಗಿನ ಜಾವ ೨.೩೦ ವೇಳೆ ಮಹಾವೀರ್ ಮಾರ್ಕೆಟಿಂಗ್ ಪಾನ್ ಮಸಾಲಾ ಗೋಡನ್ನಲ್ಲಿ ಕಳ್ಳತನ ವಾಗಿತ್ತು.
ಕಳ್ಳತನ ಮಾಡಿ ತಮಿಳುನಾಡಿಗೆ ಸಾಗಿಸುತ್ತಿದ್ದ ಮೂರು ವಾಹನ ಓರ್ವ ವ್ಯಕ್ತಿ ಬಂಧನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ೧೧ ಮಂದಿ ಆರೋಪಿಗಳು ಪರಾರಿ, ಆರೋಪಿಗಳ ಪತ್ತೆಗಾಗಿ ಚಾಮರಾಜನಗರ ಪೂರ್ವ ಠಾಣೆ ಪೊಲೀಸರ ಬಲೆ ಬೀಸಿದ್ದಾರೆ.
ತಮಿಳುನಾಡಿನ ತಿರಪೂರು ಜಿಲ್ಲೆಯ ಧರ್ಮಪುರಿಯ ಅಬುತಲ್ಲಾ ಬಂಧಿತ ಆರೋಪಿಯಾಗಿದ್ದಾರೆ.