ಪಿ.ರಾಜಣ್ಣರಿಂದ ಮಹಿಳೆಯರಿಗೆ ಸೀರೆ, ಯುವಕರಿಗೆ ಆಟೋ ವಿತರಣೆ

ಪಿ.ರಾಜಣ್ಣರಿಂದ ಮಹಿಳೆಯರಿಗೆ ಸೀರೆ, ಯುವಕರಿಗೆ ಆಟೋ ವಿತರಣೆ

ಮಹದೇವಪುರ, ಸೆ. 19: ಯುವಕ ಹಾಗು ಯುವತಿಯರು ಬೇರೆಯವರಿಗೆ ಅವಲಂಬಿತವಾಗದೆ ಸ್ವಾವಲಂಬಿಯಾಗಿ ತಮ್ಮ ಸ್ವಂತ ಕಾಲುಮೇಲೆ ಬದುಕಬೇಕೆಂದು ಮಾಜಿ ನಗರ ಸಭಾ ಅದ್ಯಕ್ಷ ಪಿ.ರಾಜಣ್ಣ ತಿಳಿಸಿದರು.

ಕ್ಷೇತ್ರದ ಕಾಡುಗುಡಿ ವಾರ್ಡ್ನ ಅಂಬೇಡ್ಕರ್‌ನಗರ ಗುಡ್ಡದ ತಮ್ಮ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ 50 ವರ್ಷದ ಹುಟ್ಟು ಹಬ್ಬವನ್ನು ನೂರಾರು ಆಭಿಮಾನಿಗಳ ಹಾಗು ಕುಟುಂಬ ಸದಸ್ಯರ ಸಮುಖದಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು. 50ನೇಯ ಹುಟ್ಟು ಹಬ್ಬದ ಅಂಗವಾಗಿ ನೆರೆದಿದ್ದ ನೂರಾರು ಮಹಿಳೆಯರಿಗೆ ಸೀರೆ ವಿತರಿಸಿದರು.

ಯುವಕ, ಯುವತಿಯರು ಸ್ವಂತ ಉದ್ಯೋಗ ಹೊಂದಲು ಹೋಲಿಗೆ ಯಂತ್ರ ಹಾಗು ಆಟೋ, ತಮ್ಮ ಸ್ವಂತ ಖರ್ಚಿನಿಂದ ವಿತರಿಸಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ಇವರು ಸುಮಾರು ಬಡ ಜನರಿಗೆ ಮದುವೆ ಹಾಗು ಶುಭ ಕಾರ್ಯಗಳಿಗೆ ಧನ ಸಹಾಯ ಮಾಡಿಕೊಂಡು ಬಂದಿರುತ್ತಾರೆ.

ಮಾಜಿ ಸಂಸದ ಹಾಗು ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದ ಸಾಂಗ್ಲಿಯಾನ ಇವರ 50ನೇಯ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡು ಶುಭಕೋರಿ ಮಾತನಾಡಿದರು. ಮಹದೇವಪುರ ನಗರ ಸಭಾ ಅದ್ಯಕ್ಷರಾಗಿದ್ದಾಗ ನೂರಾರು ಬಡವರಿಗೆ ಮನೆ ಕಟ್ಟಿಸಿ ಕೊಟ್ಟಿರುವುದು ಹಾಗು ಅಭಿವೃದ್ದಿ ಕಾಮಗಾರಿಗಳು ಇವರ ರಾಜಕೀಯ ಭವಿಷ್ಯಕ್ಕೆ ಶ್ರೀರಕ್ಷೆಯಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಬರಲಿ ಎಂಬ ಆಶಯವನ್ನು ವ್ಯೆಕ್ತಪಡಿಸಿದರು. ಇದೆ ಸಮಯದಲ್ಲಿ ನೂರಾರು ಅಭಿಮಾನಿಗಳು ಹಾಗು ಮುಖಂಡರುಗಳು ಇವರ 50 ನೇಯ ಹುಟ್ಟು ಹಬ್ಬಕ್ಕೆ ಶುಭಕೋರಿದರು.

ಈ ಸಂದರ್ಬದಲ್ಲಿ ಪಾಲಿಕೆ ಸದಸ್ಯ ಎಸ್.ಉದಯ್‌ಕುಮಾರ್, ಮುಖಂಡರಾದ ದೊಡ್ಡಎಲ್ಲಪ್ಪ, ಮುನಿಸ್ವಾಮಿ ಸೇರಿದಂತೆ ನೂರಾರು ಇವರ ಅಭಿಮಾನಿಗಳು ಪಾಲ್ಗೊಂಡರು.

ಫ್ರೆಶ್ ನ್ಯೂಸ್

Latest Posts

Featured Videos