ಅನಂತಾಕ್ಷ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಅನಂತಾಕ್ಷ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಸುಸಜ್ಜಿತ ನೂತನ ಅನಂತಾಕ್ಷ ಕಣ್ಣಿನ ಆಸ್ಪತ್ರೆಯನ್ನು ಮಾಜಿ ಸಿಎಂ. ಎಚ್.ಡಿ ಕುಮಾರ ಸ್ವಾಮಿ ಉದ್ಘಾಟನೆ ಮಾಡಿದ್ದಾರೆ.
ಮಾತನಾಡಿದ ಅವರು ಮಾಲೀಕ ಡಾ.ನೂತನ್ ನೇತೃತ್ವದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡಲಾಗುತ್ತಿದು, ನೆಲಮಂಗಲದ ಹೃದಯ ಭಾಗವಾಗಿರುವ ಬಸ್ ನಿಲ್ದಾಣದ ಹತ್ತಿರ ಇಂಥದ್ದೊಂದು ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿದೆ. ಸುತ್ತಮುತ್ತಲ ಈ ಭಾಗದ ಜನರಿಗೆ ಬಹಳ ಅನುಕೂಲಕರವಾಗಲಿದೆ ಎಂದು ತಿಳಿಸಿದ್ದಾರೆ.
ದಿನೇದಿನೆ ನೆಲಮಂಗಲ ನಗರ ನಾಗಾಲೋಟದಲ್ಲಿ ಬೆಳೆಯುತ್ತಿದೆ. ತಾಲೂಕಿನ ಜನತೆ ತಮ್ಮ ಕಣ್ಣಿನ ಸಮಸ್ಯೆಗಳನ್ನು ತೋರಿಸಿಕೊಳ್ಳಲು ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಇದೀಗ ಇಂಥದ್ದೊಂದು ಕಣ್ಣಿನ ಆಸ್ಪತ್ರೆಯನ್ನು ನೂತನವಾಗಿ ಪ್ರಾರಂಭ ಮಾಡಿರುವುದು ತುಂಬಾ ಒಳ್ಳೆಯ ವಿಚಾರ ತಾಲೂಕಿನ ಹಲವರ ದೃಷ್ಠಿ ದೋಷ ನಿವಾರಿಸಲು ಸಜ್ಜಾಗಿದೆ ಹೈಟೆಕ್ ಕಣ್ಣಿನ ಆಸ್ಪತ್ರೆ.
ಋಣತ್ಮಾಕ ಕಾರ್ಯಗಳ ಕಡೆ ಗಮನ ಕೊಡಬೇಕು.ತಾತ್ಕಾಲಿಕವಾಗಿ ಯಾರನ್ನೊ ಖುಷಿ ಪಡಿಸಲು ಅಪಘಾತ ಮಾಡಿಕೊಂಡ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜಕೀಯವಾಗಿ ತಾತ್ಕಾಲಿಕವಾಗಿ ನಾಲ್ಕು ಜನಗಳಿಗೆ ಖುಷಿ ಕೊಡಲು ಪ್ರಾಧಿಕಾರ ನಿರ್ಮಾಣ ಮಾಡೋದ್ರಿಂದ ಯಾವುದೇ ಅಭಿವೃಧ್ದಿ ಆಗೋದಿಲ್ಲ. ಸರ್ಕಾರದ ನಿಜವಾದ ಜವಬ್ದಾರಿ ಜನರ ನಿಜವಾದ ಸಮಸ್ಯೆ ಏನಿದೆ, ಜನರ ತೆರಿಗಳ ಹಣ ಯಾವ ರೀತಿ ಬಳಕೆ ಮಾಡಬೇಕು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos