ಟೊರಾಂಟೋ, ಜ. 13 : ಇರಾನ್ನಲ್ಲಿ ಉಕ್ರೇನ್ನ ವಿಮಾನ ಉರುಳಿಸಿದ ಘಟನೆಯನ್ನು ಖಂಡಿಸಿ ಘಟನೆಯಲ್ಲಿ ಸಾವನ್ನಪ್ಪಿದ ಕೆನಡಾ ಮೂಲದ 57 ಪ್ರಜೆಗಳಿಗೆ ಇಂದು ಇಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕುತೂಹಲ ಭರಿತ ವಿಷಯವೆಂದರೆ ಕೆನಡಾದಲ್ಲಿ ನೆಲೆಸಿರುವ ಇರಾನ್ ಮೂಲದವರೇ ಹೆಚ್ಚಾಗಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು.
ಮತ್ತು ಅಲ್ಲಿನ ಸರ್ಕಾರದ ಧೋರಣೆಯನ್ನು ಕೂಡ ಖಂಡಿಸಿ ಘೋಷಣೆಯನ್ನು ಕೂಡ ಕೂಗಲಾಯಿತು. ಪ್ರಧಾನಮಂತ್ರಿ ಜಸ್ಟೀನ್ ಟೂರ್ಗ್ಯೂ ಮಾತನಾಡಿ, ಅಲ್ಲಿನ ಪ್ರಜೆಗಳು ನಿಜಕ್ಕೂ ಭಯದಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇರುವವರಿಗೆ ಎಲ್ಲಾ ರೀತಿಯ ಮಾನವೀಯತೆಯಿಂದ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.