ಯಾವ ತನಿಖೆಗೂ ಹೆದರಲ್ಲ : ಹೆಚ್ ಡಿಕೆ

ಯಾವ ತನಿಖೆಗೂ ಹೆದರಲ್ಲ : ಹೆಚ್ ಡಿಕೆ

ಹುಬ್ಬಳ್ಳಿ, ಅ. 28 : ದೂರವಾಣಿ ಕದ್ದಾಲಿಕೆ, ಐಎಂಎ ಹಗರಣ ಸೇರಿದಂತೆ ಮತ್ತಿತರ ಪ್ರಕರಣಗಳ ತನಿಖೆಗೆ ಹೆದರುವುದಿಲ್ಲ ರಕ್ಷಣೆ ನೀಡಿ ಎಂದು ಯಾರ ಹತ್ತಿರವೂ ಭಿಕ್ಷೆ ಬೇಡುವುದೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಪರಿಹಾರ ಕಾರ್ಯಗಳಿಗೆ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕು. ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಲ್ಲ. ಆದರೆ ಸಚಿವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos