ಬೆಂಗಳೂರು,ನ.19: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿ 12 ಆವೃತ್ತಿಗಳಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಈವರೆಗೆ ಚಾಂಪಿಯನ್ ಕಪ್ ಎತ್ತಿ ಹಿಡಿದಿಲ್ಲ.
ಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸ್ಪಿನ್ನರ್ ಯಜುವೇಂದ್ರ ಚಹಾಲ್ರಂತಹ ಅನುಭವಿ ಆಟಗಾರರಿದ್ದರು ಆರ್ ಸಿಬಿ ಚಾಂಪಿಯನ್ ಆಗುವುದರಲ್ಲಿ ಎಡವುತ್ತಲೇ ಇದೆ.ಆದ್ದರಿಂದ ಈ ಬಾರಿ ಬರೊಬ್ಬರಿ 12 ಆಟಗಾರರನ್ನು ತಂಡದಿಂದ ಕೈ ಬಿಟ್ಟು ಹೊಸ ಆಟಗಾರರ ಸೇರ್ಪಡೆಗೆ ತಂಡ ಮುಂದಾಗಿದೆ , ಸಾಲಷ್ಟು ಬದಲಾವಣೆಯೊಂದಿಗೆ 13 ರ ಆವೃತ್ತಿಗೆ ತಂಡ ಕಣಕ್ಕೆ ಇಳಿಯಲಿದೆ.