ಚಾಮರಾಜನಗರ: ಊರಿಗೆ ಮರಳುವ ಮುನ್ನಾ ಕೋವಿಡ್ ಟೆಸ್ಟ್ ಮಾಡಿಸಿರಬೇಕು. ಗ್ರಾಮೀಣ ಭಾಗದಲ್ಲೂ ಇದು ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಬೆಂಗಳೂರಿಗೆ ಹೋಗಿ ಬಂದವರು ಈಗಿನ ಸೋಂಕಿತರಲ್ಲಿ ಹೆಚ್ಚು ಮಂದಿ ಇದ್ದಾರೆ. ಈ ಕಾರಣಕ್ಕೆ ಗ್ರಾಮೀಣ ಭಾಗಗಳಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.
ಅಲ್ಲಿ ನೆಗೆಟಿವ್ ವರದಿ ಬಂದಿದ್ದರೆ ಮಾತ್ರ ಊರಿಗೆ ಬನ್ನಿ. ಇಲ್ಲಾಂದ್ರೆ ಟೆಸ್ಟ್ ಮಾಡಿಸಿಕೊಂಡು ನಂತರವೇ ಬನ್ನಿ. ಕೋವಿಡ್ ಟೆಸ್ಟ್ ಮಾಡಿಸದೇ ಊರಿಗೆ ಮರಳಲು ಅವಕಾಶ ಇಲ್ಲ. ಒಬ್ಬರಿಂದ ಇಡೀ ಊರಿಗೆ ಸೋಂಕು ಹರಡುವುದು ಬೇಡ ಎಂಬುದು ಈ ಗ್ರಾಮಗಳ ಮುಖಂಡರ ಉದ್ದೇಶ